ಅತ್ಯಾಚಾರಕ್ಕೆ ಯತ್ನ- ಮಹಿಳೆಯಿಂದ ದೂರು

347

Get real time updates directly on you device, subscribe now.

ಮಧುಗಿರಿ: ನನ್ನನ್ನು ಮಾನಭಂಗ ಮಾಡಲು ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿರುವಂತಹ ವ್ಯಕ್ತಿಗೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಮಹಿಳೆಯೋರ್ವರು ಮಧುಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಸಬಾ ಹೋಬಳಿಯ ಅಂಚೆ ಹಳ್ಳಿ ಗ್ರಾಮದ ಮಹಿಳೆ ದೂರು ನೀಡಿದ್ದಾರೆ. ಗ್ರಾಮದ ಮಂಜುನಾಥ್‌ ಎಂಬುವರ ಮಗ ಸುರೇಶ್‌ ಎಂಬುವವನು ನನ್ನ ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ನನ್ನನ್ನು ಅತ್ಯಾಚಾರವೆಸಗಲು ಪ್ರಯತ್ನಿಸಿದ್ದು ಆಗ ನಾನು ಕಿರುಚಿಕೊಂಡೆ ಆಗ ನನ್ನ ಬಾಯಿ ಮುಚ್ಚಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಸಾಯಿಸದೆ ಬಿಡುವುದಿಲ್ಲ ಎಂದು ಹೇಳಿ ಆರೋಪಿ ಹೋಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಸುರೇಶ್‌ ನಿಂದ ಮಾನಹಾನಿ ಮತ್ತು ಪ್ರಾಣ ಹಾನಿ ಬೆದರಿಕೆ ಇದ್ದು ಇವನ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ. ಮಧುಗಿರಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಬೆಶನರಿ ಡಿವೈಎಸ್ಪಿ ಮಂಜುನಾಥ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ಮಟ್ಕಾ ಬಂಧನ: ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿರುವ ಚಿಲ್ಲರೆ ಅಂಗಡಿ ಮುಂಭಾಗ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ನಿಖರ ಮಾಹಿತಿ ಮೇರೆಗೆ ಪೊಲೀಸರು ಗುರುವಾರ ಮಧ್ಯಾಹ್ನ ದಾಳಿ ನಡೆಸಿ ಅಂಗಡಿ ಮಾಲೀಕ ಎಸ್‌.ಎ.ರಾಜಕುಮಾರ್‌ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಸಿಬ್ಬಂದಿ ಕಾಂತರಾಜು, ಟಿ.ಸಿ.ಹರೀಶ್‌ ದಾಳಿಯಲ್ಲಿ ಪಾಲ್ಗೊಂಡು 1 ರೂ. ಗೆ 70 ರೂ. ನೀಡುತ್ತೇನೆ ಎಂದು ಜನರಿಗೆ ಆಮಿಷ ತೋರಿಸಿ ಮಟ್ಕಾ ದಂಧೆ ನಡೆಸುತ್ತಾ ಜನರಿಂದ ಹಣ ಸಂಗ್ರಹಿ ಚೀಟಿಯಲ್ಲಿ ನಂಬರ್‌ ಬರೆಯುತ್ತಿದ್ದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮಧುಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!