ಕರೆಂಟ್‌ ಶಾಕ್ ಗೆ ವ್ಯಕ್ತಿ ಬಲಿ

226

Get real time updates directly on you device, subscribe now.

ಕುಣಿಗಲ್‌: ವಿದ್ಯುತ್‌ ಆಘಾತಕ್ಕೆ ಸಿಲುಕಿ ರೈತನೊಬ್ಬ ಮೃತಪಟ್ಟ ಘಟನೆ ಹುಲಿಯೂರುದುರ್ಗ ಪೊಲೀಸ್‌ಠಾಣೆ ವ್ಯಾಪ್ತಿಯ ನೀಲಸಂದ್ರ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಹುಲಿಯೂರುದುರ್ಗ ಹೋಬಳಿಯ ಹೇರೋಹಳ್ಳಿ ಸಮೀಪದ ನೀಲಸಂದ್ರ ಗ್ರಾಮದ ರಾಮಲಿಂಗಯ್ಯ (48) ಎಂದು ಗುರುತಿಸಲಾಗಿದೆ. ಈತ ಕಾಡುಹಂದಿ ಸೇರಿದಂತೆ ಇತರೆ ಪ್ರಾಣಿಗಳಿಂದ ತನ್ನ ಜಮೀನಿನ ಬೆಳೆ ರಕ್ಷಣೆ ನಿಟ್ಟಿನಲ್ಲಿ ತಂತಿ ಬೇಲಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದರು ಎನ್ನಲಾಗಿದೆ. ಶುಕ್ರವಾರ ರಾತ್ರಿ ಜಮೀನಿನ ಬಳಿ ಹೋದಾಗ ವಿದ್ಯುತ್‌ ಅಘಾತಕ್ಕೆ ಸಿಕ್ಕು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!