ಹಾವು ಕಚ್ಚಿ ವ್ಯಕ್ತಿ ಸಾವು

213

Get real time updates directly on you device, subscribe now.

ವೈ.ಎನ್.ಹೊಸಕೋಟೆ: ಹೋಬಳಿಯ ಬುಡ್ಡಾರೆಡ್ಡಿ ಗ್ರಾಮದ ಬಳಿ ಹಾವು ಕಚ್ಚಿ ಕುರಿಗಾಹಿ ಮಂಗಳವಾರ ಬೆಳಿಗ್ಗೆ ಸಾವನಪ್ಪಿದ್ದಾರೆ.
ಜಮೀನಿನಲ್ಲಿ ಕುರಿರೊಪ್ಪ ಹಾಕಿಕೊಂಡಿದ್ದು, ಅದರಲ್ಲಿದ್ದ ತಟ್ಟಿಯನ್ನು ಮೇಲೆತ್ತಿದಾಗ ಅದರಲ್ಲಿದ್ದ ಹಾವು ರವಿಕುಮಾರ್ (22) ಎಂಬ ಕುರಿಗಾಹಿಯನ್ನು ಕಚ್ಚಿದೆ. ಪಾವಗಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ವೇಳೆ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಸಂಬಂಧ ವೈ.ಎನ್.ಹೊಸಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ವಶ
ವೈ.ಎನ್.ಹೊಸಕೋಟೆ:
ಹೋಬಳಿಯ ಚಿಕ್ಕ ಜಾಲೋಡು ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮದ್ಯವನ್ನು ವೈ.ಎನ್.ಹೊಸಕೋಟೆ ಠಾಣಾ ಪಿಎಸ್ಐ ಎಸ್.ಭಾರತಿ ಮತ್ತು ತಂಡ ಸೋಮವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳ ಮನೆಗಳಿಂದ ಸುಮಾರು ಲಕ್ಷದ ಮೌಲ್ಯ 30 ಕೇಸ್ ಮದ್ಯ ದೊರೆತಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!