ಜೆಡಿಎಸ್‌ ತೊರೆಯಲ್ಲ ಎಂದರೇ ಸಿಬಿಎಸ್?

309

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಮಾಜಿ ಶಾಸಕ ಸಿ.ಬಿ ಸುರೇಶ್‌ ಬಾಬು ಪಕ್ಷ ಬದಲಾವಣೆ ಮಾಡುವ ಬಗ್ಗೆ ತಾಲೂಕಿನಲ್ಲಿ ಗಾಳಿ ಸುದ್ದಿ ಹರಡಿತ್ತು ಇದಕ್ಕೆಲ್ಲಾ ತೆರೆ ಎಳೆದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಕೇತುಗಾನಹಳ್ಳಿ ತೋಟದಲ್ಲಿ ನಡೆದ ಜೆಡಿಎಸ್‌ ಕಾರ್ಯಗಾರದಲ್ಲಿ ಅಪೇಕ್ಷಿತರಾಗಿ ಭಾಗವಹಿಸಿ ಕ್ಷೇತ್ರಕ್ಕೆ ನಾನೇ ಜೆಡಿಎಸ್‌ ಅಭ್ಯರ್ಥಿ ಎಂಬ ಸಂದೇಶವನ್ನು ಸಿ.ಬಿ ಸುರೇಶ್‌ಬಾಬು ನೀಡಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ ಭದ್ರಕೋಟೆಯನ್ನಾಗಿ ಮಾಡಿದ್ದ ಮಾಜಿ ಶಾಸಕ ಸಿ.ಬಿ ಸುರೇಶ್‌ ಬಾಬು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಇತ್ತಿಚಿನ ದಿನಗಳಲ್ಲಿ ಪಕ್ಷ ಬದಲಾವಣೆ ಮಾಡುತ್ತಾರೆ ಎಂಬ ಗಾಳಿ ಸುದ್ದಿ ತಾಲೂಕಿನಲ್ಲಿ ಪಸರಿಸಿತ್ತು. ಆದರೇ ಇದರ ಬಗ್ಗೆ ಮಾಜಿ ಶಾಸಕರು ಎಲ್ಲಿಯೂ ಮಾತನಾಡಿರಲಿಲ್ಲ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಕುಟುಂಬಕ್ಕೆ ಅತ್ಯಂತ ಆಪ್ತರಾಗಿರುವ ಸಿ.ಬಿ.ಸುರೇಶ್‌ ಬಾಬು ಜೆಡಿಎಸ್‌ ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ಮಾತು ಸಹ ಕೇಳಿಬರುತಿತ್ತು. ಇದಕ್ಕೆಲ್ಲ ತೆರೆ ಎಳೆದಿರುವ ಸಿಬಿಎಸ್‌ ಜೆಡಿಎಸ್‌ ಸಂಘಟನ ಕಾರ್ಯಗಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿಯವರ ಜೊತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಎಲ್ಲಾರ ಬಾಯಿಗೆ ಬೀಗ ಹಾಕಿದ್ದಾರೆ.

Get real time updates directly on you device, subscribe now.

Comments are closed.

error: Content is protected !!