ಮನೆಗೆ ನುಗ್ಗಿ ಹಣ, ವಡವೆ ದೋಚಿದ ಕಳ್ಳರು

502

Get real time updates directly on you device, subscribe now.

ಕುಣಿಗಲ್‌: ಮನೆಗೆ ನುಗ್ಗಿದ ದರೋಡೆಕೋರರು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ, ವಡವೆ ದೋಚಿರುವ ಘಟನೆ ಕುಣಿಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೊತ್ತಗೆರೆ ಹೋಬಳಿಯ ವೆಂಕಪ್ಪನಪಾಳ್ಯದ ಭೈರೇಶ ಎಂಬಾತ ಮನೆಯಲ್ಲಿರುವಾಗ ಗುರುವಾರ ರಾತ್ರಿ ಹತ್ತರಿಂದ ಹನ್ನೊಂದು ಗಂಟೆ ವೇಳೆಯಲ್ಲಿ ಮನೆಗೆ ನುಗ್ಗಿದ ದರೋಡೆಕೋರರ ಗುಂಪು ಆತನ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ, ಹದಿನೈದು ಸಾವಿರ ನಗದು, 150 ಗ್ರಾಂ. ಚಿನ್ನ, 1600 ಗ್ರಾಂ ಬೆಳ್ಳಿಯ ಸಾಮಾನು ದೋಚಿ ಪರಾರಿಯಾಗಿದ್ದಾರೆ. ಭೈರೇಶನ ಕುಟುಂಬದವರು ಕಾರ್ಯ ನಿಮಿತ್ತ ಬೇರೆ ಊರಿಗೆ ತೆರಳಿದ್ದರು, ಬೆಳಗ್ಗೆ ಸಂಬಂಧಿಕರು ನೋಡಿ ಗಾಯಗೊಂಡಿದ್ದವನನ್ನು ಬೆಂಗಳೂರು ನಿಮಾನ್ಸ್ ಗೆ ದಾಖಲಿಸಿದ್ದು, ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!