ಚಿರತೆ ಸೆರೆಗೆ ಬಂತು ಬೋನ್

360

Get real time updates directly on you device, subscribe now.

ಕುಣಿಗಲ್‌: ಚಿರತೆ ದಾಳಿಗೆ ಎರಡು ಕುರಿ ಬಲಿಯಾಗಿರುವ ಘಟನೆ ಹುಲಿಯೂರು ದುರ್ಗ ಹೋಬಳಿಯ ಎಡೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಎಡೆಹಳ್ಳಿ ಗ್ರಾಮದ ಸಿದ್ದಗಂಗಯ್ಯ ಎಂಬಾತ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಕುರಿಕಟ್ಟಿ ಹಾಕಿದ್ದು ಶುಕ್ರವಾರ ರಾತ್ರಿ ಕೊಟ್ಟಿಗೆ ಬಂದ ಚಿರತೆ ಎರಡು ಕುರಿಗಳ ಬಲಿಪಡೆದಿದೆ.
ಗಲಾಟೆಗೆ ನೆರೆಹೊರೆಯವರು ಹೊರಬಂದಾಗ ಚಿರತೆ ಪರಾರಿಯಾಗಿದೆ. ವಿಷಯ ತಿಳಿದ ಮೇರೆಗೆ ವಲಯ ಅರಣ್ಯಾಧಿಕಾರಿ ಮನ್ಸೂರ್‌, ಸಹಾಯಕ ಅಧಿಕಾರಿ ಶಂಕರ್‌ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನೆರವೇರಿಸಿ ಇಲಾಖೆಯಿಂದ ಪರಿಹಾರ ಮಂಜೂರಿಗೆ ಅಗತ್ಯ ಪ್ರಕ್ರಿಯೆ ನೆರವೇರಿಸಿದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಚಿರತೆ ಹಿಡಿಯಲು ಎಡೆಹಳ್ಳಿ ಸಮೀಪದಲ್ಲಿ ಬೋನು ವ್ಯವಸ್ಥೆಗೊಳಿಸಿದರು.

Get real time updates directly on you device, subscribe now.

Comments are closed.

error: Content is protected !!