ನೀರಿಗೆ ಕಾಲು ಜಾರಿ ಬಿದ್ದು ಯುವಕ ಸಾವು

304

Get real time updates directly on you device, subscribe now.

ಹುಳಿಯಾರು: ಅಣೆ ಮೇಲೆ ಹತ್ತಲು ಹೋಗುವಾಗ ಕಾಲು ಜಾರಿ ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಹಂದನಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಕಸಂದ್ರ ಬಳಿ ಶನಿವಾರ ಜರುಗಿದೆ.
ಹುಳಿಯಾರು ಸಮೀಪದ ಎರೇಹಳ್ಳಿ ದೊಡ್ಡನಹಟ್ಟಿಯ ದಯಾನಂದ್‌ (19) ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಈತ ತನ್ನ ಸ್ನೇಹಿತರೊಂದಿಗೆ ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿದ್ದ ಅಂಕಸಂದ್ರದ ಅಣೆ ನೋಡಲು ಹೋಗಿದ್ದಾನೆ.
ಅಣೆ ಹತ್ತುವಾಗ ಕಾಲು ಜಾರಿ ಬಿದ್ದಿದ್ದಾನೆ ಎನ್ನಲಾಗಿದ್ದು ಈಜು ಬಾರದಿದ್ದರಿಂದ ಬಿದ್ದ ತಕ್ಷಣ ನೀರಿನಲ್ಲಿ ಮುಳುಗಿದ್ದಾನೆ. ಅಲ್ಲೇ ಇದ್ದ ಈಜು ಬಲ್ಲವರು ಉಳಿಸುವ ಪ್ರಯತ್ನ ಪಟ್ಟರಾದರೂ ಸಾಧ್ಯವಾಗಲಿಲ್ಲ, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಅಗ್ನಿಶಾಮಕ ಸಿಬ್ಬಂದಿ ಮೃತ ದೇಹ ಹುಡುಕುತ್ತಿದ್ದು ಮಳೆಯಿಂದ ನೀರಿನ ಹರಿವು ಹೆಚ್ಚಾಗಿರುವುದರಿಂದ ಇನ್ನೂ ಪತ್ತೆಯಾಗಿಲ್ಲ.

Get real time updates directly on you device, subscribe now.

Comments are closed.

error: Content is protected !!