ಕರೆಂಟ್‌ ಶಾಕ್‌- ಕುರಿಗಾಹಿ ಸಾವು

248

Get real time updates directly on you device, subscribe now.

ಕುಣಿಗಲ್‌: ಮೇಕೆಗಳಿಗೆ ಸೊಪ್ಪು ಕತ್ತರಿಸಲು ಹೋದ ಕುರಿಗಾಹಿ ವಿದ್ಯುತ್‌ ಆಘಾತಕ್ಕೆ ಸಿಕ್ಕು ಮೃತಪಟ್ಟ ಘಟನೆ ಅಮೃತೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಶೆಟ್ಟಿಬೀಡು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಶೆಟ್ಟಿಬೀಡು ಗ್ರಾಮದ ಸಮೀಪದ ಯಳವರಹಟ್ಟಿ ಗ್ರಾಮದ ಪುಟ್ಟರಾಜು (45) ಮೃತ ವ್ಯಕ್ತಿಯಾಗಿದ್ದು, ಮೇಕೆಗಳಿಗೆ ಸೊಪ್ಪು ಕತ್ತರಿಸಲು ಮರಕ್ಕೆ ಜಾವಲಿ ಮೂಲಕ ಯತ್ನಿಸಿದ್ದು, ಸಮೀಪದಲ್ಲೆ ಹಾದು ಹೋಗಿದ್ದ ವಿದ್ಯುತ್‌ ತಂತಿ ತಗುಲಿ ತುಂಡಾದ ಪರಿಣಾಮ ವಿದ್ಯುತ್‌ ಅಘಾತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!