ಎಲೆಕ್ಟ್ರಿಕಲ್ ಆಟೋಗೆ ಕೇಂದ್ರ ಸಚಿವರಿಂದ ಚಾಲನೆ

242

Get real time updates directly on you device, subscribe now.


ತುಮಕೂರು: ನಗರದ ರಿಂಗ್ ರಸ್ತೆ ಹೊರವಲಯದ ಮರಳೂರು ಸಮೀಪ ವಿಯಾ ಮೋಟಾರ್ಸ್ ವತಿಯಿಂದ ಆಪೆ ಎಲೆಕ್ಟ್ರಿಕಲ್ ಪ್ಯಾಸೆಂಜರ್ ಮತ್ತು ಗೂಡ್‌ಸ್‌ ಆಟೋ ಶೋರೂಂ ಅನ್ನು ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಾರಣಾಸಿಯಲ್ಲಿ ಕುಳಿತು ದುರ್ಗಾದೇವಿ ಮಂತ್ರ ಪಠಿಸುವ ಮೂಲಕ ಜನರನ್ನು ಮರಳು ಮಾಡಲು ನೋಡುತ್ತಿರುವ ಪ್ರಿಯಾಂಕ ಗಾಂಧಿ ಇಂತಹ ನಾಟಕಗಳನ್ನು ಕೈಬಿಡಲಿ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಹಿಂದುಗಳೊಂದಿಗೆ ಹಿಂದುಗಳಾಗಿ, ಕ್ರೈಸ್ತರೊಂದಿಗೆ ಕೈಸ್ತರಾಗಿ, ಮುಸ್ಲಿಂರೊಂದಿಗೆ ಮುಸ್ಲಿಂರಾಗುವ ರಾಹುಲ್ ಗಾಂಧಿ ಕುಟುಂಬದ ಬಗ್ಗೆ ದೇಶ ಜನಕ್ಕೆ ಗೊತ್ತಿದೆ ಎಂದರು.
ಮತಗಳಿಕೆಗಾಗಿ ರಾಜಕಾರಣ ಮಾಡುವ ಕಾಂಗ್ರೆಸ್ ಪಕ್ಷ ದೇಶದಲ್ಲಿ ಇನ್ನು ಉಳಿದುಕೊಂಡಿರುವುದು ದುರ್ದೈವ, ಕಾಂಗ್ರೆಸ್ ಮಾಡಿರುವ ಕೆಲಸಗಳಿಂದ ಈಗಾಗಲೇ ಕಾಂಗ್ರೆಸ್ ನಿರ್ನಾಮವಾಗಬೇಕಿತ್ತು, ರಾಹುಲ್ ಮತ್ತು ಪ್ರಿಯಾಂಕ ಇಬ್ಬರು ಸೇರಿಕೊಂಡು ಈಗ ಕಾಂಗ್ರೆಸ್ ಗೆ ಕೊನೆ ಮೊಳೆ ಹೊಡೆಯುತ್ತಿದ್ದಾರೆ ಎಂದರು.
ಸಂಸದ ಜಿ.ಎಸ್.ಬಸವರಾಜ್ ಮಾತನಾಡಿ, ಖಾಸಗಿ ಕಂಪೆನಿಗಳು ಅಥವಾ ಶೋರೂಂಗಳು ಬಡ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಶೋ ರೂಂನ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ವಾಲಿ, ವರ್ಷ ವೀರೇಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!