ಸಿಡಿಲು ಬಡಿದು ವಾಸದ ಮನೆ ಭಸ್ಮ

239

Get real time updates directly on you device, subscribe now.

ಹುಳಿಯಾರು: ಸಿಡಿಲಿಗೆ ವಾಸದ ಮನೆ ಸಂಪೂರ್ಣ ಭಸ್ಮವಾಗಿ ಲಕ್ಷಾಂತರ ರೂ ನಷ್ಟವಾಗಿರುವ ಘಟನೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಸಂಭವಿಸಿದೆ.
ಇಲ್ಲಿನ ಬಟ್ಟೆ ವ್ಯಾಪಾರಿ ಓಂಕಾರಮೂರ್ತಿ ಅವರ ವಾಸದ ಮನೆ ಸಿಡಿಲಿನ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದೆ. ಮನೆಯಲ್ಲಿ ಎಲ್ಲರೂ ಮಲಗಿರುವ ಸಂದರ್ಭದಲ್ಲಿ ವಾಷಿಂಗ್‌ ಮಿಷಿನ್ ಗೆ ಸಿಡಿಲು ಹೊಡೆದು ಬೆಂಕಿ ಹೊತ್ತಿಕೊಂಡಿದೆ.
ಇದರಿಂದ ಓಂಕಾರಮೂರ್ತಿ ಗಾಬರಿಗೊಂಡು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗೆ ಕರೆತಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಡಿಲಿನ ಬೆಂಕಿ ಕ್ಷಣಾರ್ಧದಲ್ಲಿ ಮನೆ ಪೂರ್ತಿ ಆಕ್ರಮಿಸಿ ಮನೆಯಲ್ಲಿದ್ದ ವ್ಯಾಪಾರದ ಬಟ್ಟೆ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಹೊತ್ತಿ ಉರಿದಿವೆ.
ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ 3 ಲಕ್ಷ ರೂ. ಬೆಲೆ ಬಾಳುವ ವ್ಯಾಪಾರಕ್ಕೆ ತಂದಿದ್ದ ಬಟ್ಟೆಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಟಿವಿ, ವಾಷಿಂಗ್‌ ಮಿಷಿನ್‌, ಟಿವಿಎಸ್, 20 ಮನೆಯ ತೀರು, ಹಲಗೆ ಸೇರಿದಂತೆ ಮನೆಯ ಬಹುತೇಕ ವಸ್ತುಗಳು ಬೂದಿಯಾಗಿವೆ.
ಹುಳಿಯಾರು ಪಿಎಸ್‌ಐ ಕೆ.ಟಿ.ರಮೇಶ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಗ್ರಾಮದಲ್ಲಿ ಇದೇ ಸಂದರ್ಭದಲ್ಲಿ ಯಳನಾಡು ಗ್ರಾಮದ ಸಿದ್ದೇಶ್‌ ಎಂಬುವವರಿಗೆ ಸೇರಿದ ಒಂದು ತೆಂಗಿನ ಮರಕ್ಕೂ ಸಹ ಸಿಡಿಲು ಬಡಿದು ಹೊತ್ತಿ ಉರಿದಿದೆ.

Get real time updates directly on you device, subscribe now.

Comments are closed.

error: Content is protected !!