ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ- ಐವರ ಬಂಧನ

ತುಮಕೂರಿನಲ್ಲಿ ಖಾಕಿ ಕಟ್ಟೆಚ್ಚರ

9,020

Get real time updates directly on you device, subscribe now.

ತುಮಕೂರು: ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ಅನ್ಯ ಕೋಮಿನ ಯುವಕರು ನಗರದ ಗುಬ್ಬಿಗೇಟ್‌ ಬಳಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತುಮಕೂರು ನಗರ ಬೂದಿ ಮುಚ್ಚಿದ ಕೆಂಡದಂತಿದೆ. ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಭೀಮಸಂದ್ರದ ಕಡೆಯಿಂದ ಮಂಜು ಭಾರ್ಗವ ಅವರು ಕಾರಿನಲ್ಲಿ ತುಮಕೂರು ಕಡೆ ಬರುತ್ತಿರುವಾಗ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರು ವಿಲೀಂಗ್‌ ಮಾಡಲು ಅವಕಾಶ ನೀಡಲಿಲ್ಲ ಎಂದು ಕಾರನ್ನು ಅಡ್ಡಗಟ್ಟಿ ರಾಡ್‌ನಿಂದ ಹಲ್ಲೆ ನಡೆಸಿದ್ದರು. ಮಂಜು ಭಾರ್ಗವ್‌ ಅವರನ್ನು ರಕ್ಷಿಸಲು ಬಂದ ಕಿರಣ್‌ ಎಂಬಾತನನ್ನು ನೆಲಕ್ಕೆ ಕೆಡವಿ ಮನಸೋ ಇಚ್ಛೆ ಥಳಿಸಿದ್ದರು, ಸಾರ್ವಜನಿಕರು ಬಂದು ಜಗಳ ಬಿಡಿಸಿ ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರೆ ಬಳಿ ನೂರಾರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸೇರಿದ್ದರಿಂದ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಈ ಸಂಬಂಧ ಹಲ್ಲೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಅಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದ್ದು, ನಗರದ ಗುಬ್ಬಿ ಗೇಟ್‌ ಮತ್ತು ತುಮಕೂರು ಮಹಾನಗರ ಪಾಲಿಕೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಸೊಗಡು ಶಿವಣ್ಣ ಆಕ್ರೋಶ
ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಬಂದ ಮಾಜಿ ಸಚಿವ, ಕಟು ಹಿಂದೂತ್ವವಾದಿ ಸೊಗಡು ಶಿವಣ್ಣ ಅವರು, ಹಿಂದೂಗಳ ಹಲ್ಲೆ ಮಾಡಿದರೆ ಸುಮ್ಮನಿರಲು ಇದೇನು ಪಾಕಿಸ್ತಾನ, ಅಫ್ಘಾನಿಸ್ತಾನ, ಬಲೂಚಿಸ್ತಾನ ಅಲ್ಲ, ನಾವು ಶಕ್ತವಾಗಿದ್ದೇವೆ, ನಮಗೂ ಹಬ್ಬ ಮಾಡಲು ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!