ಬೈಕ್ ಗೆ ಜೀಪ್ ಡಿಕ್ಕಿ: ಇಬ್ಬರು ಸಾವು

186

Get real time updates directly on you device, subscribe now.

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಬಳುವನೇರಲು ಗ್ರಾಮದ ಸರ್ಕಲ್ ಬಳಿ ಅಪಘಾತವಾಗಿ, ಹಾಲಿನ ಡೈರಿ ಮಾಜಿ ಕಾರ್ಯದರ್ಶಿ ನಾಗರಾಜು (65), ಬಿ.ಮುದ್ದೇನಹಳ್ಳಿ ಗ್ರಾಮದ ಹಾಲಿನ ಡೈರಿ ಕಾರ್ಯದರ್ಶಿ ಚಿದಾನಂದ(55) ಮೃತ ದುರ್ದೈವಿಗಳು.
ಕಾರ್ಯನಿಮಿತ್ತ ಬಳುವನೇರಲು ಗ್ರಾಮದಿಂದ ತಿಪಟೂರು ಕಡೆಗೆ ಒಂದೇ ಬೈಕಿನಲ್ಲಿ ತೆರಳುವಾಗ ಎದುರಿನಿಂದ ಬಂದ ಟಾಟಾ ಮಹೀಂದ್ರ, ಕೆಎ12ಪಿ7193 ವಾಹನವು ಡಿಕ್ಕಿ ಹೊಡೆದು ಒಬ್ಬರು ಸ್ಥಳದಲ್ಲಿ ಪ್ರಾಣಬಿಟ್ಟರೆ ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿರುತ್ತಾರೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು.
ಪೊಲೀಸರ ಮೇಲೆ ಸ್ಥಳೀಯರ ಆಕ್ರೋಶ: ನಾಲ್ಕು ತಾಲ್ಲೂಕುಗಳ ಮುಖ್ಯ ಸರ್ಕಲ್ ಆಗಿದ್ದು ಇಲ್ಲಿ ಯಾವುದೇ ರಸ್ತೆ ಫಲಕಗಳಾಗಲಿ, ವೇಗವಾಗಿ ಬರುವ ವಾಹನಗಳಿಗೆ ರಸ್ತೆ ಹಂಪ್ಗಳಾಗಲಿ ಇರುವುದಿಲ್ಲ, ಅಪಘಾತಕ್ಕೆ ಮುಖ್ಯ ಕಾರಣ ಪೊಲೀಸರು ವಾಹನಗಳ ದಾಖಲೆ ಪರಿಶೀಲಿಸಲು ವಾಹನಗಳನ್ನು ತಡೆಯುತ್ತಿದ್ದರು, ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಅಪಘಾತ ಆಗಿರಬಹುದೆಂದು, ಅಕ್ಕಪಕ್ಕದ ಗ್ರಾಮಸ್ಥರು ಸೇರಿ ಪೊಲೀಸರ ವಿರುದ್ಧ ಘೋಷಣೆ ಕೂಗಿ ಸಂಬಂಧಪಟ್ಟ ಪೊಲೀಸರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಠಾಣಾ ಸಿಪಿಐ, ಜಯಲಕ್ಷ್ಮಿ ಭೇಟಿ ನೀಡಿದ್ದು, ಹೊನ್ನವಳ್ಳಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!