ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಲಿ

427

Get real time updates directly on you device, subscribe now.

ಕುಣಿಗಲ್‌: ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಶಾಸಕ ಡಾ.ರಂಗನಾಥ್‌ ಹೇಳಿದರು.
ಗುರುವಾರ ಪಟ್ಟಣದ ಹೋಲಿ ಟ್ರಿನಿಟಿ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಕೋವಿಡ್‌ ಕಾಲದಲ್ಲಿ ನಾಗರಿಕರು ಅನುಭವಸಿದ ಯಾತನೆ ಹಾಗೂ ಅದಕ್ಕೆ ದೊರೆತ ಪ್ರತಿಸ್ಪಂದನೆ ಎರಡನ್ನು ನಾವು ಕಂಡಿದ್ದೇವೆ, ಅದು ನಮಗೆ ಕಲಿಸಿದ ಪಾಠ ಹಾಗೂ ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದರು.
ತಹಶೀಲ್ದಾರ್‌ ಮಹಾಬಲೇಶ್ವರ್‌ ಮಾತನಾಡಿ ವಿದ್ಯಾರ್ಥಿ ಜೀವನವನ್ನು ಶ್ರಮ ಸಾಧನೆಯಿಂದ ಅರ್ಥ ಪೂರ್ಣವಾಗಿಸಬೇಕು ಅದಕ್ಕೆ ಈ ಕಾಲೇಜು ನಿಮ್ಮ ಸಾಧನೆಯ ಮೆಟ್ಟಿಲಾಗಬೇಕು ಎಂದರು.
ಜೀನೇಶ್‌ ಕೆ ವರ್ಕಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪುರಸಭಾಧ್ಯಕ್ಷ ನಾಗೇಂದ್ರ, ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಜಿ.ಚಾಕೋ, ಪುರಸಭೆ ಸದಸ್ಯ ಶ್ರೀನಿವಾಸ್‌, ರೆಜಿ ಚೇರಿಯನ್‌ ಥಾಮಸ್‌, ಡಾ.ಲಿಸಿ, ಪ್ರಸಾದ್‌, ಸತ್ಯನ್‌ ಹಾಗೂ ಉಪಪ್ರಾಂಶುಲರಾದ ರೇಖಾ ಇದ್ದರು.

Get real time updates directly on you device, subscribe now.

Comments are closed.

error: Content is protected !!