ಪೊಲೀಸರಿಗೆ ಎನರ್ಜಿ ಜ್ಯೂಸ್‌ ವಿತರಣೆ

169

Get real time updates directly on you device, subscribe now.

ತುಮಕೂರು: ನಗರದ ಹೊಸಬಡಾವಣೆ ಪೊಲೀಸ್‌ ಠಾಣೆ, ಕ್ಯಾತ್ಸಂದ್ರ ಪೊಲೀಸ್‌ ಠಾಣೆ, ಡಿಎಆರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಕೊರಟಗೆರೆ ಪೊಲೀಸ್‌ ಠಾಣೆ ಸಿಬ್ಬಂದಿಗೆ ತುಮಕೂರು ರೋಟರಿ ವತಿಯಿಂದ ಎನರ್ಜಿ ಜ್ಯೂಸ್‌ ವಿತರಿಸಲಾಯಿತು.
ತುಮಕೂರು ರೋಟರಿ ಅಧ್ಯಕ್ಷ ಎ.ಎಸ್‌.ಬಸವರಾಜ ಹಿರೇಮಠ್‌ ನೇತೃತ್ವದಲ್ಲಿ ಕೊರೊನಾ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಪೊಲೀಸರಿಗೆ ಆಯಾ ಠಾಣೆಗಳಿಗೆ ತೆರಳಿ ಈ ಎನರ್ಜಿ ಜ್ಯೂಸ್‌ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ರೋಟರಿ ಅಧ್ಯಕ್ಷ ಎ.ಎಸ್‌.ಬಸವರಾಜು ಹಿರೇಮಠ್‌, ಕಳೆದ 2 ವರ್ಷಗಳಿಂದ ಕೊರೊನಾ ಬಂದಾಗಿನಿಂದಲೂ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರೆಯರು, ಡಿ.ಹೆಚ್.ಓ ಕಚೇರಿ ಸಿಬ್ಬಂದಿ, ಪೊಲೀಸರು ಸೇರಿದಂತೆ ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಿಸಿದವರಿಗೆ ತುಮಕೂರು ರೋಟರಿ ವತಿಯಿಂದ ಸ್ಯಾನಿಟೈಸರ್‌, ಮಾಸ್ಕ್ ಗಳನ್ನು ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಟಿ.ಆರ್‌.ಸದಾಶಿವಯ್ಯ, ಉಮೇಶ್‌, ಮಹೇಶ್‌, ಮಲ್ಲೇಶಯ್ಯ, ಉಮೇಶಯ್ಯ, ಸಹ ಕಾರ್ಯದರ್ಶಿ ರಾಜಶೇಖರ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!