ಅಪಘಾತದಲ್ಲಿ ಕಾರ್ಮಿಕ ಸಾವು

269

Get real time updates directly on you device, subscribe now.

ಹುಳಿಯಾರು: ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿಯೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರಿನ ಕೇಶವಪುರ ತಿರುವಿನಲ್ಲಿ ಸೋಮವಾರ ಸಂಜೆ ಜರುಗಿದೆ.
ಹುಳಿಯಾರು ಸಮೀಪದ ವಳಗೆರೆಹಳ್ಳಿಯ ಎಸ್‌.ನವೀನ್‌ರಾವ್‌ (21) ಮೃತ ದುರ್ಧೈವಿಯಾಗಿದ್ದಾನೆ. ಈತ ಇಟ್ಟಿಗೆ ಕಾರ್ಖಾನೆಯ ಕೂಲಿ ಕಾರ್ಮಿಕನಾಗಿದ್ದು ಎಂದಿನಂತೆ ಕೂಲಿ ಕೆಲಸ ಮುಗಿಸಿಕೊಂಡು ತನ್ನೂರಿಗೆ ಬೈಕ್‌ನಲ್ಲಿ ಬರುತ್ತಿರುವಾಗ ಈ ದುರ್ಘಟನೆ ನಡೆದಿದೆ.
ಬೈಕ್‌ಗೆ ಟಿಪ್ಪರ್‌ ಅಥವಾ ಟ್ರ್ಯಾಕ್ಟರ್‌ ಗುದ್ದಿರಬಹುದೆಂದು ಊಹಿಸಲಾಗಿದ್ದು ಅಪಘಾತಕ್ಕೆ ಕಾರಣವಾಗಿರುವ ವಾಹನ ನಿಲ್ಲಿಸದೆ ಪರಾರಿಯಾಗಿದೆ. ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ತೀರ್ವ ರಕ್ತಸ್ತ್ರಾವವಾಗಿ ನವೀನ್‌ ಸಾವನ್ನಪ್ಪಿದ್ದಾನೆ. ಹುಳಿಯಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!