ಹಗಲಿನಲ್ಲೇ ಮನೆಗೆ ಕನ್ನ ಹಾಕಿದ ಕಳ್ಳರು

247

Get real time updates directly on you device, subscribe now.

ಕೊಡಿಗೇನಹಳ್ಳಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಜಮೀನಿನ ಪತ್ರಗಳು ಸೇರಿದಂತೆ ಬಂಗಾರದ ಒಡವೆಯನ್ನು ಕಳವು ಮಾಡಿರುವ ಘಟನೆ ಸೋಮವಾರ ಸಂಜೆ ವರದಿಯಾಗಿದೆ.
ಹೋಬಳಿಯ ತೆರಿಯೂರು ಗ್ರಾಮದ ನಿವಾಸಿ ರಾಮಕೃಷ್ಣಪ್ಪ ಎಂಬುವವರು ಮನೆ ಬೀಗ ಹಾಕಿ ಹೋಲದ ಕಡೆ ಹೋಗಿದ್ದಾಗ ಸಮಯ ಸುಮಾರು 12 ಗಂಟೆಯ ಆಸುಪಾಸಿನಲ್ಲಿ ಸುಮಾರು 3 ಜನ ಬಂದು ಮನೆಯ ಬೀಗ ಓಡೆದು ಬೀರುವಿನಲ್ಲಿದ್ದ 80 ಸಾವಿರ ನಗದು ಹಣ, ನೆಕ್ಲೇಸ್, ಉಂಗುರ ಸೇರಿದಂತೆ ಎರಡು ಜಮೀನಿನ ಪತ್ರಗಳು ಕಳವು ಮಾಡಿದ್ದಾರೆ.
ಈ ಬಗ್ಗೆ ಸಂಬಂಧಿಕರ ನಡುವೆ ಜಮೀನಿನ ವಿಚಾರವಾಗಿ ಜಗಳ ನಡೆದಿದ್ದು ಪ್ರಕರಣ ನ್ಯಾಯಲಯದಲ್ಲಿರುವ ಕಾರಣ ತನ್ನ ಸಂಬಂಧಿಕರೇ ಕಳವು ಮಾಡಿರಬಹುದು ಎಂಬ ಶಂಕೆ ಇದೆ ಎಂದು ರಾಮಕೃಷ್ಣಪ್ಪ ಕೊಡಿಗೇನಹಳ್ಳಿ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಎಎಸ್ಐ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!