ದೇವಸ್ಥಾನದ ಬಳಿ ಕರಡಿ ಪ್ರತ್ಯಕ್ಷ

310

Get real time updates directly on you device, subscribe now.

ಕೊಡಿಗೇನಹಳ್ಳಿ: ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಕತ್ತಿರಾಜನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಅಂಕಳಮ್ಮ ದೇವಾಲಯದ ಬಳಿ ನಿತ್ಯ ಕರಡಿ ಪ್ರತ್ಯಕ್ಷವಾಗುತ್ತಿದ್ದು ಆಹಾರಕ್ಕಾಗಿ ಗ್ರಾಮಕ್ಕೆ ಲಗ್ಗೆ ಇಡುತ್ತಿದೆ. ಮಧ್ಯರಾತ್ರಿ ದೇವಸ್ಥಾನದ ಬಾಗಿಲು ತೆರದು ನುಗ್ಗಲು ಯತ್ನಿಸಿದ್ದು ಬೀಗ ಹಾಕಿದ ಪರಿಣಾಮ ಮರಳಿ ವಾಪಸ್ ಪೊದೆಗಳಿಗೆ ತೆರಳಿದೆ ಎನ್ನಲಾಗಿದೆ.
ಈಗಾಗಲೇ ಎರಡು ಮೂರು ಬಾರಿ ಕರಡಿಯು ದೇವಸ್ಥಾನಕ್ಕೆ ನುಗಿದ್ದ ಓಳಗಿದ್ದ ಎಣ್ಣೇ ಕುಡಿದ್ದ ಪರಿಣಾಮ ದೇವಸ್ಥಾನಕ್ಕೆ ಬೀಗ ಹಾಕಿದ್ದು ಮತ್ತೊಮ್ಮೆ ಬಂದಿದ್ದ ಕರಡಿಯ ದೃಶ್ಯವನ್ನು ಗ್ರಾಮದ ಯುವಕರು ತಮ್ಮ ಮೊಬೈಲ್ ಸೆರೆ ಹಿಡಿದು ಎಚ್ಚರಿಕೆ ಸಂದೇಶದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಕರಡಿಗಳನ್ನು ಬೋನ್ ಮೂಲಕ ಹಿಡಿದು ಗ್ರಾಮಸ್ಥರಿಗೆ ರಕ್ಷಣೆ ಒದಗಿಸಿಬೇಕೆಂದು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!