ಎಣ್ಣೆ ಮೇಷ್ಟ್ರು ಅಮಾನತು

320

Get real time updates directly on you device, subscribe now.

ಕುಣಿಗಲ್‌: ಮದ್ಯಪಾನ ಮಾಡಿಕೊಂಡು ಶಾಲೆಗೆ ಹಾಜರಾಗಿದ್ದ ಶಿಕ್ಷಕನನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಸೂಳೆಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹನುಮಂತರಾಯಪ್ಪ ಎಂಬುವರೆ ಅಮಾನತಿಗೆ ಒಳಗಾಗಿರುವ ಎಣ್ಣೆ ಮೇಷ್ಟ್ರು.
ಈ ತಿಂಗಳ 12 ರಂದು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದು, ಇದನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ತೂರಾಡಿಕೊಂಡು, ತೊದಲಿಕೊಂಡು ಮಾತನಾಡಿದ್ದು ಗ್ರಾಮಸ್ಥರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿ.ಆರ್.ಪಿ ಅವರಿಗೆ ವರದಿ ನೀಡಲು ಸೂಚಿಸಿದ ಮೇರೆಗೆ ಸಿ.ಆರ್.ಪಿ ಮಂಜುಳಾ ಪರಿಶೀಲನೆ ನಡೆಸಿದ್ದು ಸದರಿ ಶಿಕ್ಷಕರ ಮೇಲೆ ಗ್ರಾಮಸ್ಥರು ಮಾಡಿದ ಆರೋಪ ಸಾಬೀತಾಗುವ ಜೊತೆಯಲ್ಲಿ ಹಾಜರಾತಿ ಪುಸ್ತಕದಲ್ಲಿ ಸಾಕಷ್ಟು ಅವ್ಯವಸ್ಥೆ ಕಂಡುಬಂದಿದ್ದವು, ಸಿಆರ್‌ಪಿ ನೀಡಿದ ವರದಿ ಮೇರೆಗೆ ಕ್ಷೇತ್ರಶಿಕ್ಷಣಾಧಿಕಾರಿ ತಿಮ್ಮರಾಜಯ್ಯ, ಸೋಮವಾರ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!