ನವ ವಿವಾಹಿತ ಜೋಡಿ ಆತ್ಮಹತ್ಯೆ

219

Get real time updates directly on you device, subscribe now.

ಕುಣಿಗಲ್‌: ಕೌಟುಂಬಿಕ ಕಲಹಕ್ಕೆ ನವವಿವಾಹಿತ ಜೋಡಿ ನೇಣಿಗೆ ಶರಣಾದ ಧಾರುಣ ಘಟನೆ ಕುಣಿಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಂಪಸಾಗರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕೊತ್ತಗೆರೆ ಹೋಬಳಿಯ ಕೆಂಪಸಾಗರ ಗ್ರಾಮದ ವರಲಕ್ಷ್ಮೀ (23), ಈಕೆಯ ಪತಿ ಮುನಿಸ್ವಾಮಿ (26) ಎಂದು ಗುರುತಿಸಲಾಗಿದೆ. ಇವರಿಬ್ಬರು ಒಂದೆ ಗ್ರಾಮದವರಾಗಿದ್ದು ಹತ್ತಿರದ ಸಂಬಂಧಿಗಳೆನ್ನಲಾಗಿದೆ. ಕಳೆದ ಆರು ತಿಂಗಳ ಹಿಂದೆಯಷ್ಟೆ ವಿವಾಹ ನೆರವೇರಿತ್ತು, ಹಸು ಸಾಕಾಣೆ ವಿಷಯದಲ್ಲಿ ಉಂಟಾದ ಗೊಂದಲ, ವಾಗ್ವಾದ ಸೇರಿದಂತೆ ಸಣ್ಣಪುಟ್ಟ ಕೌಟುಂಬಿಕ ಕಲಹಕ್ಕೆ ಪತ್ನಿ ವರಲಕ್ಷ್ಮೀ ಮನೆಯ ಕೊಣೆಯಲ್ಲಿ ನೇಣಿಗೆ ಶರಣಾಗಿದ್ದು, ಶನಿವಾರ ಬೆಳಗ್ಗೆ ಕೋಣೆಯಿಂದ ಬಾರದೆ ಇರುವ ಬಗ್ಗೆ ಅನುಮಾನಗೊಂಡ ಮನೆಯವರು ಬಾಗಿಲು ತೆಗೆದು ನೋಡಿದಾಗ ನೇಣಿಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಪತ್ನಿಯ ನೇಣಿನ ವಿಷಯ ತಿಳಿದ ಪತಿಯೂ ಗ್ರಾಮದ ಸಮೀಪದಲ್ಲಿದ್ದ ಅವರ ತೋಟದಲ್ಲಿದ್ದ ಮರ ಒಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ, ದಾರಿಹೋಕರು ನೋಡಿ ಆತನನ್ನು ಇಳಿಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್‌ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!