ಬೈಕ್ ಅಪಘಾತ: ಸ್ಪಂದಿಸಿದ ಗ್ರಾಪಂ ಮಾಜಿ ಉಪಾಧ್ಯಕ್ಷ

ಮಾನವೀಯತೆಗೆ ಸಾರ್ವಜನಿಕರಿಂದ ಪ್ರಶಂಸೆ

242

Get real time updates directly on you device, subscribe now.


ಕೊಡಿಗೇನಹಳ್ಳಿ: ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಯುವಕ ಕಿರಣ್ಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ತಾಲೂಕಿನ ಗಡಿ ಭಾಗ ತೆರಿಯೂರು ಬಳಿ ಘಟನೆ ನಡೆದಿದ್ದು ಆಂಬ್ಯುಲೆನ್ಸ್ ಸೇವೆಗೆ ಕೆರೆ ಮಾಡಿದ್ದಾರೆ, ಸಮಯಕ್ಕೆ ಆಂಬ್ಯುಲೆನ್ಸ್ ಸೇವೆ ಸಿಗದ ಕಾರಣ ಇದನ್ನು ಕಂಡ ಮಾಜಿ ಗ್ರಾಪಂ ಉಪಾಧ್ಯಕ್ಷ ಗೋಪಾಲ್ ತನ್ನ ಟ್ರ್ಯಾಕ್ಟರ್ನಲ್ಲೇ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸೇವೆ ಸಿಗದ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವಾಯಿತು. ಗಡಿ ಭಾಗದಲ್ಲಿ ಯಾವುದೆ ಅನಾಹುತ, ಅಪಘಾತ ಸಂಭವಿಸಿದರೂ ಯಾವುದೆ ತುರ್ತು ಸೇವೆಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಗಾಯಾಳನ್ನು ಪ್ರಥಮ ಚಿಕಿತ್ಸೆ ನೀಡುವಷ್ಟರಲ್ಲಿ ಪೋಷಕರು ಸ್ಥಳಕ್ಕೆ ಧಾವಿಸಿ ಮಾನವೀಯತೆ ಮೆರೆದ ಜನಪ್ರತಿನಿಧಿ ಅಭಿನಂಧಿಸಿದ್ದು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತಾಗಿ ಈ ಗಡಿ ಭಾಗಕ್ಕೆ ಆಂಬ್ಯುಲೆನ್ಸ್ ಸೇವೆ ಓದಗಿಸಬೇಕೆಂದು ಒತ್ತಾಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!