ಖೈದಿ ನಾಪತ್ತೆ- ಹುಡುಕಿ ಕೊಟ್ರೆ ಬಹುಮಾನ

314

Get real time updates directly on you device, subscribe now.

ಕುಣಿಗಲ್‌: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಖೈದಿಯೊಬ್ಬ ಪೆರೋಲ್‌ ರಜೆ ಮೇಲೆ ಬಂದು ಕಾಣೆಯಾಗಿರುವುದರಿಂದ ಆತನ ಪತ್ತೆಗೆ ಸೂಕ್ತ ಬಹುಮಾನ ನೀಡುವುದಾಗಿ ಅಮೃತೂರು ಪೊಲೀಸರು ತಿಳಿಸಿದ್ದಾರೆ.
ಅಮೃತೂರು ಹೋಬಳಿಯ ಸಂಕೇನಪುರದ ನಾರಾಯಣಗೌಡ ಎಂಬಾತ 2010 ರಲ್ಲಿ ಬೆಂಗಳೂರು ನಂದಿನಿ ಲೇಔಟ್ ನಲ್ಲಿ ರಂಗನಾಥ ಎಂಬುವರ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2012 ರಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಆಗಿರುತ್ತದೆ. ತನ್ನ ತಾಯಿ ಹುಚ್ಚಮ್ಮಳ ಅನಾರೋಗ್ಯ ನಿಮಿತ್ತ ಹದಿನಾಲ್ಕು ದಿನ ಪೆರೋಲ್‌ ರಜೆ ಮೇಲೆ ಬಂದಿದ್ದು ಕಾರಾಗೃಹಕ್ಕೆ ವಾಪಾಸಾಗದೆ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಈತನ ಪತ್ತೆಗೆ ಹಲವಾರು ಪ್ರಯತ್ನ ಮಾಡಿದರೂ ಪತ್ತೆಯಾಗಿಲ್ಲ, ಆದ್ದರಿಂದ ಈತನ ಪತ್ತೆ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಈತನ ಪತ್ತೆಗೆ ಸಹಕಾರ ನೀಡಿದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಾಮಿಯ ಎಡಗೈ ತೋಳಿನಲ್ಲಿ ಹುಚ್ಚಮ್ಮ, ಬಲಗೈ ತೋಳಿನಲ್ಲಿ ಓಂ ಎಂಬ ಹಚ್ಚೆ ಇದೆ, ಈತನ ಮಾಹಿತಿ ಸಿಕ್ಕಲ್ಲಿ ಅಮೃತೂರು ವೃತ್ತ ನಿರೀಕ್ಷಕರು, ದೂರವಾಣಿ ಸಂ.940802936, ತುಮಕೂರು ಕಂಟ್ರೋಲ್‌ ರೂಂ 940802900ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!