ಬೈಕ್ ಅಪಘಾತ: ಇಬ್ಬರು ಸಾವು

340

Get real time updates directly on you device, subscribe now.


ಹುಳಿಯಾರು: ಹುಳಿಯಾರು ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದ ಸುನಿಲ್ (28), ಈಶ್ವರ್ (33) ಗುರುವಾರ ನಡೆದ ಅಪಘಾತದಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಹುಳಿಯಾರಿನ ಅಂಜನಭೋವಿ ಅವರ ಮಗ ಲೋಕೇಶ್ ಅವರ ಮದುವೆಗೆಂದು ಹೊಸದುರ್ಗ ತಾಲೂಕಿನ ಕಂಚಿಪುರದ ಬಳಿ ತೆರಳಿದ್ದ ಸುನಿಲ್ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವಾಪಸ್ ಹುಳಿಯಾರಿಗೆ ಬರುವಾಗ ಕಿಟ್ಟದಾಳ್ ಮುಂದೆ ಸಿಗುವ ಬೆಲವತ್ತೆ ಮರದ ಕ್ರಾಸ್ ಬಳಿ ವಾಹನ ನಿಯಂತ್ರಣಕ್ಕೆ ಸಿಗದೆ ಲೈಟ್ ಕಂಬಕ್ಕೆ ಗುದ್ದಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!