ಬೆಳೆ ಪರಿಹಾರ ಪಡೆಯಲು ದಾಖಲೆ ಸಲ್ಲಿಸಿ

214

Get real time updates directly on you device, subscribe now.

ಕುಣಿಗಲ್‌: ಬೆಳೆಹಾನಿ ಪರಿಹಾರ ಪಡೆಯಲು ಸರ್ಕಾರ ದಿನಾಂಕ ವಿಸ್ತರಿಸಿದ್ದು ಡಿಸೆಂಬರ್‌ 20 ರೊಳಗೆ ಅಗತ್ಯ ದಾಖಲೆಗಳನ್ನು ರೈತರು ಸಲ್ಲಿಸಿ ಬೆಳೆ ಪರಿಹಾರ ಪಡೆಯುವಂತೆ ತಹಶೀಲ್ದಾರ್‌ ಮಹಾಬಲೇಶ್ವರ್‌ ಹೇಳಿದರು.
ಶನಿವಾರ ಬೆಳೆಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ, ಕಂದಾಯ ಇಲಾಖೆಯ ಸಿಬ್ಬಂದಿ ಸಭೆ ನಡೆಸಿದರು. ಬೆಳೆಹಾನಿ ಪರಿಹಾರ ಪಡೆದವರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಕೇಂದ್ರಕ್ಕೆ ರಾಗಿ ಹಾಕಲು ತೊಂದರೆಯಾಗಲಿದೆ ಎಂಬ ಗೊಂದಲಕ್ಕೆ ಬಹುತೇಕ ರೈತರು ಸಿಲುಕಿದ್ದಾರೆ. ಬೆಳೆಹಾನಿ ಪಡೆಯಲು ಹಾಗೂ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಹಾಕಲು ಯಾವುದೇ ಸಂಬಂಧ ಇಲ್ಲ, ರೈತರು ಗೊಂದಲಕ್ಕೆ ಒಳಗಾಗುವುದು ಬೇಡ, ಅಗತ್ಯ ದಾಖಲೆಗಳಾದ ಸರ್ವೇ ನಂಬರ್‌, ಆಧಾರ್‌ ನಂಬರ್‌ ಬ್ಯಾಂಕ್‌ ಖಾತೆಯ ವಿವರ ನೀಡುವ ಮೂಲಕ ಅರ್ಜಿ ಹಾಕಿ ಬೆಳೆಹಾನಿ ಪರಿಹಾರ ಪಡೆಯಬಹುದು. ಕೃಷಿ, ಕಂದಾಯ ಇಲಾಖೆ ಸಿಬ್ಬಂದಿ ಈ ನಿಟ್ಟಿನಲ್ಲಿ ರೈತರಿಗೆ ಮತ್ತಷ್ಟು ಮಾಹಿತಿನೀಡಿ ತ್ವರಿತವಾಗಿ ಅರ್ಜಿ ಪಡೆದು ರೈತರಿಗೆ ನೆರವಾಗಬೇಕೆಂದರು. ತಾಲೂಕಿನಲ್ಲಿ ಒಟ್ಟಾರೆ 28100 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗಿದೆ. ಈಪೈಕಿ 18,605 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದುವರೆಗೂ ಒಟ್ಟಾರೆ 33,101 ರೈತರು ಬೆಳೆಹಾನಿಗೆ ಯಾಗಿರುವ ನಿಟ್ಟಿನಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು ಶೇ.90 ರಷ್ಟು ಮಂದಿಗೆ ನೇರವಾಗಿ ಅವರ ಖಾತೆಗೆ ಪರಿಹಾರದ ಮೊತ್ತ ಜಮೆ ಮಾಡಲಾಗಿದೆ. ಪೌತಿಖಾತೆ ಹೊಂದಿರುವ ರೈತರೂ ಸಹ ವಂಶವೃಕ್ಷದೊಂದಿಗೆ, ಜಂಟಿ ಖಾತೆ ಹೊಂದಿರುವವರೂ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಬೆಳೆಹಾನಿ ಪರಿಹಾರ ಪಡೆಯಬಹುದಾಗಿದೆ. ಈ ಮಾಹೆಯ 20 ರೊಳಗೆ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬೇಕು ಎಂದರು.

Get real time updates directly on you device, subscribe now.

Comments are closed.

error: Content is protected !!