ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ

399

Get real time updates directly on you device, subscribe now.


ತುಮಕೂರು: ಚೆಶೈರ್ ಅಂಗವಿಕಲರ ಸಂಸ್ಥೆ, ಬೆಂಗಳೂರು ಹಾಗೂ ಹೆಲನ್ ಕೇರ್ ಸಂಸ್ಥೆ, ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿರುವ ಬಡ ವಿಕಲಚೇತನರಿಗೆ 250 ಆಹಾರ ಕಿಟ್ ವಿತರಿಸಲಾಯಿತು.
ಈ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂಗವಿಕಲ ಕಲ್ಯಾಣಾಧಿಕಾರಿ ರಮೇಶ್ ಅವರು ವಿಕಲಚೇತನರಿಗೆ ಆಹಾರ ಕಿಟ್ಗಳನ್ನಿ ವಿತರಿಸಿ, ಈ ಸಂಸ್ಥೆಯ ಸೇವೆ ಶ್ಲಾಘಿಸಿದರು.
ಮುಂದಿನ ದಿನಗಳಲ್ಲೂ ಸಂಸ್ಥೆಯು ಈ ಸಾರ್ಥಕ ಸೇವೆ ಮುಂದುವರೆಸುವಂತೆಯೂ ಅವರು ಸಲಹೆ ಮಾಡಿದರು.
ಆಹಾರ ಕಿಟ್ ಪಡೆದ ವಿಕಲಚೇತನರು ಈ ಸಂಸ್ಥೆಗಳಿಂದ ನಮಗೆ ಕೋವಿಡ್ ಸಂದರ್ಭದಲ್ಲಿ ಅತ್ಯಂತ ಉಪಯೋಗಕರ ಸೇವೆ ದೊರೆತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಲನ್ ಕೆಲರ್ ಸಂಸ್ಥೆಯ ಸಂಸ್ಥಾಪಕರಾದ ಗಾಯತ್ರಿ ರವೀಶ್, ಜಗದೀಶ್, ಸುಕನ್ಯಾ, ಯಶಸ್ವಿನಿ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!