ವಕೀಲ್ ಸಾಬ್‌ ಆದ್ರು ಮುದ್ದಹನುಮೇಗೌಡ್ರು

208

Get real time updates directly on you device, subscribe now.

ಕುಣಿಗಲ್‌: ಮೂಲತಃ ವಕೀಲರು ಆದ ಮಾಜಿ ನ್ಯಾಯಾಧೀಶ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸುಮಾರು ಎರಡುವರೆ ದಶಕಗಳ ನಂತರ ವಕೀಲ ವೃತ್ತಿಗೆ ಮರಳಿ ಕಕ್ಷಿದಾರರೊಬ್ಬರ ಪರ ವಾದ ಮಂಡಿಸಿದರು.
ತಾಲೂಕಿನ ಸೊಬಗಾನಹಳ್ಳಿಯವರಾದ ಎಸ್‌.ಪಿ.ಮುದ್ದಹನುಮೇಗೌಡರು, ವಕೀಲ ವೃತ್ತಿಯನ್ನು ಕುಣಿಗಲ್‌ ಪಟ್ಟಣದಿಂದಲೇ ಆರಂಭಿಸಿದ್ದರು. ನ್ಯಾಯಾಧೀಶರಾಗಿ, ನಂತರ ರಾಜಕಾರಣದಲ್ಲಿ ಶಾಸಕರಾಗಿ, ಸಂಸದರಾಗಿ ಆಯ್ಕೆಯಾಗಿದ್ದ ಕಾರಣ ವಕೀಲ ವೃತ್ತಿಯಿಂದ ವಿರಮಿಸಿದ್ದರು, ಬುಧವಾರ ಕಕ್ಷಿದಾರರೊಬ್ಬರ ಪರ ವಾದ ಮಂಡಿಸಲು ಕುಣಿಗಲ್‌ ನ್ಯಾಯಾಲಯ ಆವರಣಕ್ಕೆ ಆಗಮಿಸಿದ ಮಾಜಿ ಸಂಸದರನ್ನು ಹಿರಿಯ, ಕಿರಿಯ ವಕೀಲರು ಸಂತೋಷದಿಂದ ಸ್ವಾಗತಿಸಿದರು, ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿ ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕಿದರು. ಸರತಿ ಬಂದಾಗ ವಾದ ಮಂಡಿಸಲು ನ್ಯಾಯಾಲಯಕ್ಕೆ ತೆರಳಿದ ನಂತರ ಪುನಹ ವಕೀಲರ ಸಂಘದಲ್ಲಿ ಬಹಳ ಸಮಯ ಕುಳಿತು ವಕೀಲರೊಂದಿಗೆ ಚರ್ಚೆ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!