ಡಿ. 25ರಂದು ಶಾಲಿನಿ ಪುರಸ್ಕಾರ ಸಮಾರಂಭ

338

Get real time updates directly on you device, subscribe now.

ತುಮಕೂರು: ತುಮಕೂರು ವಾರ್ತೆ ಪತ್ರಿಕೆಯು ಎಸ್.ಆರ್.ದೇವಪ್ರಕಾಶ್ ಸಹಕಾರದೊಂದಿಗೆ ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ಡಿ.25 ರಂದು ನಗರದ ಬಿಜಿಎಸ್ ವೃತ್ತದಲ್ಲಿರುವ ಟೌನ್ ಕ್ಲಬ್ ನಲ್ಲಿ ಆಯೋಜಿಸಲಾಗಿದೆ.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಭಾಗವಹಿಸುತ್ತಿದ್ದಾರೆ.
ಇದೇ ವೇಳೆ 2022 ರ ಕ್ಯಾಲೆಂಡ್ ಬಿಡುಗಡೆಯನ್ನು ಉದ್ಯಮಿ ಎಸ್.ಪಿ.ಚಿದಾನಂದ್ ನೆರವೇರಿಸಲಿದ್ದಾರೆ, 2019 ಹಾಗೂ 2020 ನೇ ಸಾಲಿನ ಶಾಲಿನ ಪ್ರಶಸ್ತಿ ಪುರಸ್ಕೃತರಿಗೆ ಹೆಸರಾಂತ ಉದ್ಯಮಿ ಡಾ.ವಿನಯ್ ಬಾಬು, ಇನ್ನರ್ವೀಲ್ನ ನಿಕಟಪೂರ್ವ ಅಧ್ಯಕ್ಷೆ ಪ್ರಿಯಾ ಪ್ರದೀಪ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು.
ಕವಿ ಬಿದಲೋಟಿ ರಂಗನಾಥ್, ಕವಿ ಮನೋಜ್ ಎಂ. ಮಕರಂದ, ಸಾಹಿತಿ ತುರುವೇಕೆರೆ ಪ್ರಸಾದ್, ಸಾಹಿತಿ ಎಂ.ಡಿ.ಚಂದ್ರೇಗೌಡ ನಾರಮ್ನಳ್ಳಿ ಶಾಲಿನಿ ಪುರಸ್ಕಾರ ಸ್ವೀಕರಿಸಲಿದ್ದಾರೆ. ಹಿರಿಯ ಲೇಖಕ ಪ್ರೊ.ಎಸ್.ಆರ್.ದೇವಪ್ರಕಾಶ್, ರಾಮಕೃಷ್ಣ ಜಿ.ಎನ್. ಉಪಸ್ಥಿತರಿರುವರು.

Get real time updates directly on you device, subscribe now.

Comments are closed.

error: Content is protected !!