ಈಜಲು ಹೋಗಿ ವಿದ್ಯಾರ್ಥಿ ಸಾವು

171

Get real time updates directly on you device, subscribe now.

ಪಟ್ಟನಾಯಕನಹಳ್ಳಿ: ಈಜಾಡಲು ಹೋಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವ ಘಟನೆ ಶಿರಾ ತಾಲೂಕಿನ ತಡಕಲೂರು ಗ್ರಾಮ ದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿ ಪ್ರಜ್ವಲ್‌ (10) ತನ್ನ ತಾತನ ಮನೆ ಇರುವ ದೊಡ್ಡಬಾಣಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಪ್ರಜ್ವಲ್‌ ತನ್ನ ಸ್ವಗ್ರಾಮ ತಡಕಲೂರು ಗ್ರಾಮಕ್ಕೆ ಕಳೆದ ಎರಡು ದಿನಗಳ ಹಿಂದೆ ಬಂದಿದ್ದಾನೆ, ಕೆರೆಯಲ್ಲಿ ನೀರು ಇದ್ದ ಕಾರಣ ಸ್ನೇಹಿತರೊಂದಿಗೆ ತಡಕಲೂರು ಕೆರೆಯಲ್ಲಿ ಈಜಾಡಲು ಹೋಗಿದ್ದಾನೆ, ಆದರೆ ಸ್ನೇಹಿತರು ಪ್ರಜ್ವಲ್‌ ಕಾಣದಾದಾಗ ಗಾಬರಿಗೊಂಡು ಮನೆಗೆ ಹಿಂತಿರುಗಿದ್ದಾರೆ.
ಪೋಷಕರು ಪ್ರಜ್ವಲ್‌ ಕಾಣೆಯಾಗಿದ್ದಾನೆ ಎಂಬ ಹುಡುಕಾಟದಲ್ಲಿ ಮುಂದಾಗಿದ್ದಾರೆ, ತಡಕಲೂರು ಕೆರೆ ದಡದಲ್ಲಿ ಪ್ರಜ್ವಲ್‌ ತೊಟ್ಟಿದ್ದ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾಗಿ ಅನುಮಾನಗೊಂಡು ಸ್ನೇಹಿತರನ್ನು ವಿಚಾರಿಸಿದಾಗ ನಮ್ಮ ಜೊತೆ ಈಜಾಡಲು ಬಂದಿದ್ದ ಎಂಬ ಮಾಹಿತಿ ಹೇಳಿದ್ದಾರೆ.
ತದನಂತರ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ಪ್ರಜ್ವಲ್‌ ಶವ ಪತ್ತೆಯಾಗಿದೆ, ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!