ಸರ್ವರಿಗೂ ಸೂರು ಸರ್ಕಾರದ ಕನಸು: ಜ್ಯೋತಿಗಣೇಶ್

ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ 1450 ಮನೆಗೆ ಶಂಕುಸ್ಥಾಪನೆ

237

Get real time updates directly on you device, subscribe now.

ತುಮಕೂರು: ಕರ್ನಾಟಕ ಸರ್ಕಾರ ವಸತಿ ಇಲಾಖೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 28 ಘೋಷಿತ ಕೊಳಚೆ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ 1450 ಮನೆಗಳ ಮಂಜೂರಾಗಿದ್ದು ನಿರ್ಮಾಣದ ಶಂಕುಸ್ಥಾಪನೆಯನ್ನು ದೇವರಾಯಪಟ್ಟಣ ಎಕೆ ಕಾಲೋನಿಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ನೆರವೇರಿಸಿದರು.
ನಂತರ ಮಾತನಾಡಿ ಶಾಸಕರು ಕೋವಿಡ್‌ನಿಂದಾಗಿ 2 ವರ್ಷ ತಡವಾಗಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಘೋಷಿತ ಕೊಳಚೆ ಪ್ರದೇಶಗಳಲ್ಲಿ ನಿವೇಶನ ಹೊಂದಿರುವ ಕುಟುಂಬಗಳಿಗೆ 3.5 ಚದುರ ಮನೆಯನ್ನು 6.5 ಲಕ್ಷ ವೆಚ್ಚದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ ಇತರೆ ಇಲಾಖೆಗಳ ಸಂಪನ್ಮೂಲ ಕ್ರೂಡಿಕರಿಸಿ ಬ್ಯಾಂಕ್‌ ಸಾಲ ಹಾಗೂ ಫಲಾನುಭವಿಗಳ ವಂತಿಕೆಯಿಂದ ಮನೆ ನಿರ್ಮಿಸಲು ತುಮಕೂರು ನಗರಕ್ಕೆ ವಸತಿ ಸಚಿವ ವಿ.ಸೋಮಣ್ಣ 1450 ಮನೆ ಮಂಜೂರು ಮಾಡಿದ್ದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಪರಿಶ್ರಮದಿಂದ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯಂತೆ ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಸರ್ವರಿಗೂ ಸೂರು ಒದಗಿಸುವುದು ಸರ್ಕಾರಗಳ ಕನಸಾಗಿದೆ, ಇದು ಸಕಾರಗೊಳ್ಳಲು ಜನರ ಸಹಕಾರ ಅಗತ್ಯ, ಹಾಗಾಗಿ ಯೋಜನೆ ಪಡೆಯಲು ಎಸ್‌ಸಿ, ಎಸ್‌ಟಿಗಳು ಶೇ.10 ರಷ್ಟು ಹಾಗೂ ಸಾಮಾನ್ಯ ಮತ್ತು ಇತರೆ ವರ್ಗದವರು ಶೇ.15 ರಷ್ಟು ಫಲಾನುಭವಿ ವಂತಿಕೆ ಪಾವತಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಪಾಲಿಕೆ ಮೇಯರ್‌ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಬಡವರಿಗೆ ಮನೆ ದೊರಕಿಸುವ ಕೆಲಸ ಸಂವಿಧಾನದ ಆಶಯವಾಗಿದೆ ದೇವರು ಮೆಚ್ಚುವ ಈ ಕೆಲಸಕ್ಕೆ ನಗರ ಪಾಲಿಕೆಯಿಂದ ಎಲ್ಲಾ ತರಹದ ಸಾಕಾರ ನೀಡಲಾಗುವುದು, ಕೊಳಚೆ ಪ್ರದೇಶಗಳಲ್ಲಿರುವ ಕೆಲವೊಂದು ಆಶಕ್ತ ಕುಟುಂಬಗಳಿಗೆ ಪಲಾನುಭವಿ ವಂತಿಕೆ ಪಾವತಿಸಲು ಮಹಾತ್ಮಗಾಂಧಿ ಯೋಜನೆಯಲ್ಲಿ ಅವಕಾಶವಿದ್ದು ಹಣ ನೀಡುವ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಿ ಕೌನ್ಸಿಲ್‌ನಿಂದ ಕ್ರಮ ವಹಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳಿಸಿಕೊಡಲಾಗುವುದು, ಶಾಸಕರ ಆಸಕ್ತಿಯಿಂದ ನಗರಕ್ಕೆ ಮತ್ತು ಸ್ಲಂ ಗಳಲ್ಲಿರುವ ಬಡವರಿಗೆ ಈ ಯೋಜನೆ ಬಂದಿರುವುದು ಸಂತೋಷವಾಗಿದೆ ಎಂದರು.
ಸ್ಲಂ ಜನಾಂದೋಲನಾ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ದೇಶದಲ್ಲಿ 4 ಟ್ರಿಲಿಯನ್‌ ಜನರಿಗೆ ವಸತಿಯಿಲ್ಲ, 2022ರಲ್ಲಿ ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬುವ ನೆನಪಿಗಾಗಿ ಭಾರತ ಸರ್ಕಾರ ಸರ್ವರಿಗೂ ಸೂರು ಯೋಜನೆ ಘೋಷಿಸಿದ್ದು, ರಾಜ್ಯದಲ್ಲಿ ಸ್ಲಂ ನಿವಾಸಿಗಳಿಗೆ 97 ಸಾವಿರ ಮನೆ ಮಂಜೂರಾಗಿದ್ದು, ಸ್ಲಂ ನಿವಾಸಿಗಳಿಗೆ ವಸತಿ ಘನತೆಯ ಸಂಕೇತವಾಗಿದೆ, ಸಂವಿಧಾನದ ಆಶಯದಂತೆ ಘನತೆಯ ಬದುಕಿಗೆ ಸರ್ಕಾರಗಳ ಜವಾಬ್ದಾರಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಸಮಾನತೆಯಿಂದ ಕಾರ್ಯ ನಿರ್ವಸಬೇಕು, ಇದಕ್ಕಾಗಿ ಸಂಘಟನೆ ಒಂದು ದಶಕದಿಂದ ನಿರಂತರ ಹೋರಾಟ ಮಾಡುತ್ತಿದೆ, ಕೋವಿಡ್‌ನಿಂದ ಕೆಲಸಗಳಿಲ್ಲದ ಕುಟುಂಬಗಳಿಗೆ ಫಲಾನುಭವಿ ವಂತಿಕೆ ಪಾವತಿಸಲು ಶಾಸಕರು, ಮೇಯರ್‌ ಮತ್ತು ಆಯುಕ್ತರು ಕ್ರಮ ವಹಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ 35ನೇ ವಾರ್ಡ್‌ನ ಸದಸ್ಯರಾದ ನಿರ್ಮಲ ಶಿವಕುಮಾರ್‌, ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ, ದೇವರಾಯಪಟ್ಟಣ ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯ ಬಸವರಾಜು, ಮುನಿಯಪ್ಪ, ಲೋಕೇಶ್‌ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ರವಿಕುಮಾರ್‌, ಸಹಾಯಕ ಅಭಿಯಂತರ ಲೋಕೇಶ್ವರಪ್ಪ, ಚೇತನ್‌, ಹೊಂಬಾಳೆ ಕನ್ಸ್ ಸ್ಟ್ರಕ್ಷನ್‌ನ ವಿಜಯಕುಮಾರ್‌, ಪ್ರತಾಪ್‌, ರವಿ, ತುಮಕೂರು ಕೊಳಗೇರಿ ಸಮಿತಿಯ ಕಾರ್ಯದರ್ಶಿ ಅರುಣ್‌, ಪದಾಧಿಕಾರಿಗಳಾದ ತಿರುಮಲಯ್ಯ, ಮೋಹನ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!