ಮಕ್ಕಳ ಪೋಷಕರಿಗೆ ನಾಯಿ ಕಡಿತ

262

Get real time updates directly on you device, subscribe now.

ಮಧುಗಿರಿ: ಶಾಲೆಗೆ ಬಿಡಲು ಬಂದ ಪೋಷಕರಿಗೆ ನಾಯಿ ಕಡಿದ ಘಟನೆ ಮಧುಗಿರಿ ಪಟ್ಟಣದ ಎಂಜಿಎಂ ಪ್ರೌಢಶಾಲಾ ಮೈದಾನದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಶಾಲೆಗೆ ಬಿಡಲು ಆಗಮಿಸಿದ್ದ ಪೋಷಕರೊಬ್ಬರಿಗೆ ಅಲ್ಲೇ ಇದ್ದ ನಾಯಿಯೊಂದು ಕಚ್ಚಿ ಗಾಯಗೊಳಿಸಿದೆ, ತಕ್ಷಣ ಪೋಷಕರು ಶಾಲೆಯವರಿಗೆ ತಿಳಿಸಿ ಮಕ್ಕಳಿಗೂ ಕಡಿಯುವ ಸಾಧ್ಯತೆಯಿದ್ದು ಎಚ್ಚರ ವಹಿಸುವಂತೆ ಸೂಚಿಸಿ ಆಸ್ಪತ್ರೆಗೆ ತೆರಳಿದರು.
ಇದೇ ವೇಳೆ ಪುರಸಭೆ ವತಿಯಿಂದ ನಡೆಯುತ್ತಿರುವ ಚರಂಡಿ ಕಾಮಗಾರಿಗೆ ಜಲ್ಲಿ ಮಣ್ಣು ಸುರಿಯುತ್ತಿದ್ದು ವಿದ್ಯಾರ್ಥಿಗಳು ಆಗಮಿಸುತ್ತಿದ್ದ ವೇಳೆ ಧೂಳು ಕುಡಿದುಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಆಡಳಿತ ಮಂಡಳಿ ಈ ಬಗ್ಗೆ ಗಮನಹರಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದರ ನಿಯಂತ್ರಣ ಮಾಡುವಂತೆ ಪುರಸಭೆ ಆಡಳಿತಕ್ಕೆ ನಾಗರಿಕರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!