ಜಿಲ್ಲೆಯಲ್ಲೂ ಕಾಂಗ್ರೆಸ್ ಸೇರಲಿದ್ದಾರೆ ಬಿಜೆಪಿಗರು: ಪರಂ

368

Get real time updates directly on you device, subscribe now.

ತುಮಕೂರು: ಸಚಿವ ಮಾಧುಸ್ವಾಮಿಗೆ ಜಿಲ್ಲಾ ಉಸ್ತುವಾರಿ ತಪ್ಪಿರುವುದು ಸರಿಯಲ್ಲ, ಮಾಧುಸ್ವಾಮಿ ಸಮರ್ಥ ನಾಯಕ ಎಂದು ಸಚಿವರ ಪರ ಮಾಜಿ ಡಿಸಿಎಂ ಡಾಜಿ.ಪರಮೇಶ್ವರ್‌ ಬ್ಯಾಟ್‌ ಬೀಸಿದ್ದಾರೆ.
ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಪರಂ ಸಚಿವ ಮಾಧುಸ್ವಾಮಿ ಒಬ್ಬ ಸಮರ್ಥ ನಾಯಕ, ಬಿಜೆಪಿ ಸರ್ಕಾರದ ಒಬ್ಬ ಕ್ರೀಯಾಶೀಲ ಸಚಿವ, ತುಮಕೂರು ಜಿಲ್ಲೆಯಲ್ಲಿ ಉಸ್ತುವಾರಿಯಾಗಿ ಒಳ್ಳೆ ಕೆಸಲ ಮಾಡಿದ್ದಾರೆ, ಅವರನ್ನು ಜಿಲ್ಲೆಯ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದು ನಮಗೆ ನಿರಾಸೆಯಾಗಿದೆ, ಇದರಿಂದ ತುಮಕೂರು ಜಿಲ್ಲೆಯ ಜನತೆಗೆ ನಷ್ಟವಾಗಿದೆ ಎಂದರು.
ಮಾಧುಸ್ವಾಮಿ ಸ್ವಲ್ಪ ಕೋಪಿಷ್ಟರಾಗಿರಬಹುದು, ಆದರೆ ಸಮರ್ಥ ನಾಯಕ, ಇದು ಬಿಜೆಪಿ ಸರ್ಕಾರದಿಂದ ತುಮಕೂರು ಜನತೆಗೆ ಮಾಡಿದ ಅನ್ಯಾಯ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಪುನಾರಚನೆ ಬಳಿಕ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆ ಆಗಲಿದೆ, ಅದು ಯಾವ ರೀತಿಯ ಬೆಳವಣಿಗೆ ಬೇಕಾದರೂ ಆಗಬಹುದು, ಸಚಿವ ಸ್ಥಾನ ಸಿಗದಿದ್ದಾಗ ಪಕ್ಷ ಬಿಟ್ಟು ಹೋಗೋರು ಇದ್ದಾರೆ, ಕಾಂಗ್ರೆಸ್‌ ಸೇರಲು ಬಿಜೆಪಿಯ ಹಲವು ಶಾಸಕರು, ಸಚಿವರು ತಯಾರಿದ್ದಾರೆ, ಬಿಜೆಪಿಗೆ ವಲಸೆ ಹೋದವರು, ಮೂಲ ಬಿಜೆಪಿಯವರು ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ, ಕೆಪಿಸಿಸಿ ಅಧ್ಯಕ್ಷರ ಬಳಿ ಕಾಂಗ್ರೆಸ್ ಗೆ ಸೇರುವವರ ಪಟ್ಟಿ ಇದೆ, ತುಮಕೂರು ಜಿಲ್ಲೆಯಲ್ಲಿ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಪರಮೇಶ್ವರ್‌ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!