ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ರಕ್ಷಣೆ

sadness of child
164

Get real time updates directly on you device, subscribe now.

sadness of child
ಕುಣಿಗಲ್‌: ಪತಿಯನ್ನು ನೋಡಲು ಬಂದ ಪತ್ನಿಗೆ ಪಿಡಿಒ ಪತಿ ಸ್ಪಂದಿಸದ ಕಾರಣ ಬೇಸತ್ತ ಪತ್ನಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಸಾರ್ವಜನಿಕರು ರಕ್ಷಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಚಿತಾ (34) (ಹೆಸರು ಬದಲಿಸಿದೆ) ಗುರುತಿಸಲಾಗಿದೆ. ಈಕೆ ತರೇದಕುಪ್ಪೆ ಗ್ರಾಮ ಪಂಚಾಯತಿ ಪಿಡಿಒ ಪತ್ನಿ ಎನ್ನಲಾಗಿದೆ. ಕಳೆದ ಹದಿನೈದು ದಿನಗಳಿಂದ ಪತಿ ಮನೆಗೆ ಬಾರದ ಕಾರಣ ಗುರುವಾರ ಪತಿ ನೋಡಲು ಬಂದಾಗ ಪತಿ ಸರಿಯಾಗಿ ಸ್ಪಂದಿಸದ ಕಾರಣ ಜಿಗುಪ್ಸೆ ಗೊಂಡು ಪಟ್ಟಣದ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈಜಾಡುತ್ತಿದ್ದ ಯುವಕರು ಆಕೆಯನ್ನು ರಕ್ಷಿಸಿ ಪೊಲೀಸರಿಗೆ ವಿಷಯ ತಿಳಿಸಿದ ಮೇರೆಗೆ ಪೊಲೀಸರು, ಆಕೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೇಳಿಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಿಡಿಒ ಸುದರ್ಶನ್‌ ಆಕೆ ಯಾರೆಂಬುದು ತಿಳಿದಿಲ್ಲ, ಘಟನೆಗು ನನಗೂ ಸಂಬಂಧ ಇಲ್ಲ ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!