ನ್ಯಾಯಾಧೀಶರನ್ನು ವಜಾಗೊಳಿಸಲು ಒತ್ತಾಯ

ಅಂಬೇಡ್ಕರ್ ಗೆ ಅವಮಾನ- ದಲಿತಪರ ಸಂಘಟನೆಗಳ ಕಿಡಿ

134

Get real time updates directly on you device, subscribe now.

ತುಮಕೂರು: ಗಣರಾಜ್ಯೋತ್ಸವ ಆಚರಣೆ ವೇಳೆ ಅಂಬೇಡ್ಕರ್‌ ಭಾವಚಿತ್ರ ಹೊರ ತೆಗೆದರೆ ಧ್ವಜಾರೋಹಣ ಮಾಡುವುದಾಗಿ ಆದೇಶಿಸಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವರ್ತನೆ ಖಂಡನೀಯ ಎಂದು ತುಮಕೂರು ಜಿಲ್ಲೆಯ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದು, ಕೂಡಲೇ ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರು ರಾಯಚೂರು ಜಿಲ್ಲೆಯ ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿ ಗಡಿಪಾರು ಮಾಡಬೇಕೆಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದರು.
ಪ್ರತಿಭಟನಾ ಸ್ಥಳಕ್ಕೆ ತುಮಕೂರು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮುಂದಿನ ಕ್ರಮದ ಬಗ್ಗೆ ಭರವಸೆ ನೀಡಿದರು.
ಈ ವೇಳೆ ಹೋರಾಟಗಾರ ಪಾವಗಡ ಶ್ರೀರಾಮ್‌ ಮಾತನಾಡಿ ಸಂವಿಧಾನ ಆಶಯಗಳಡಿ ನ್ಯಾಯಾಧೀಶರ ಸ್ಥಾನಕ್ಕೇರಿರುವ ಮಲ್ಲಿಕಾರ್ಜುನ ಗೌಡ, ಅಂಬೇಡ್ಕರ್‌ ಅವರು ನೀಡಿದ ಸ್ವಾತಂತ್ರ್ಯದಿಂದಲೆ, ಆದರೆ ಅದನ್ನು ಮರೆತು ರಾಷ್ಟ್ರೀಯ ಹಬ್ಬದಲ್ಲಿ ಅಂಬೇಡ್ಕರ್‌ ಫೋಟೋ ತೆಗೆಯಲು ಹೇಳಿರುವುದು ಖಂಡನೀಯ, ದಲಿತ ವಿರೋಧಿಯಾದ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್‌ ವಿರೋಧಿಯಾಗಿದ್ದಾನೆ ಎಂದರು.
ಅಂಬೇಡ್ಕರ್‌ ಬರೆದ ಸಂವಿಧಾನದಡಿಯಲ್ಲಿ ಓದಿ ನ್ಯಾಯಾಧೀಶನಾಗಿ ಇಂದು ದ್ರೋಹ ಮಾಡಿದ್ದಾರೆ, ಆದ್ದರಿಂದ ಘನತೆವೆತ್ತ ಉಚ್ಛ ನ್ಯಾಯಾಲಯ, ಮುಖ್ಯ ನ್ಯಾಯಾಧೀಶರು ಕೂಡಲೇ ಅವರನ್ನು ನ್ಯಾಯಾಧೀಶರ ಸೇವೆಯಿಂದ ವಜಾಗೊಳಿಸಿ ಗಡಿಪಾರು ಮಾಡಿ ರಾಜ್ಯದಲ್ಲಿ ಈ ರೀತಿಯಾಗಿ ಅಂಬೇಡ್ಕರ್‌ ಅವರಿಗೆ ಅವಮಾನವೆಸಗಿದ್ದ ದ್ರೋಹಿಗಳಿಗೆ ಶಿಕ್ಷೆಯಾಗಬೇಕು ಎಂದರು.
ಈ ವೇಳೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ ರಾಯಚೂರು ಜಿಲ್ಲೆಯ ನ್ಯಾಯಾಧೀಶರು ಅಂಬೇಡ್ಕರ್ ಗೆ ಅಗೌರವ ಅಪಮಾನ ಮಾಡಿದ್ದಾರೆ, ಕೂಡಲೇ ರಾಷ್ಟ್ರಪತಿಗಳಲ್ಲಿ ಮನವಿ ಮಾಡುವುದೇನೆಂದರೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದರು.
ಮಾದಿಗ ದಂಡೋರದ ಕುಮಾರ್‌, ಛಲವಾದಿ ಸಮುದಾಯದ ಮುಖಂಡ ಭಾನುಪ್ರಕಾಶ್‌, ದಲಿತ ಮುಖಂಡ ಕೋರ ರಾಜು, ಛಲವಾದಿ ಶೇಖರ್‌, ಜಯಣ್ಣ, ಆಟೋ ಶಿವರಾಜು, ಕೋಡಿಯಾಲ ಮಹಾದೇವ್‌, ರಾಜಣ್ಣ, ರತ್ನಮ್ಮ, ಕೆ.ಸಿ.ಗೋಪಾಲ್‌, ಜಗದೀಶ್‌, ಸುಮನ್‌, ರಾಮಮೂರ್ತಿ, ರಾಮಯ್ಯ.ಟಿ.ಸಿ, ಗ್ರಾಮ ಪಂಚಾಯತ್‌ ಸದಸ್ಯ ರಂಗಸ್ವಾಮಿ ಹಾಗೂ ಹಲವು ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!