ಕೊಲೆ ಮಾಡಿದ ಆರೋಪಿಗಳ ಬಂಧನ

ಒಂದೆ ಹುಡುಗಿ ಪ್ರೀತಿಗಾಗಿ ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

238

Get real time updates directly on you device, subscribe now.

ಮಧುಗಿರಿ: ಒಂದೇ ಹುಡುಗಿಯನ್ನು ಪ್ರೀತಿಸಿದ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದ ಪ್ರಕರಣ ಬೇದಿಸುವಲ್ಲಿ ಮಧುಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ: ಮಧುಗಿರಿ ಪಟ್ಟಣದ ಕರಡೀಪುರ ನಿವಾಸಿ ಆಟೋ ಚಾಲಕ ರವಿ ಎಂಬ ಯುವಕ ಅಪ್ರಾಪ್ತ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಹಿನ್ನೆಲೆಯಲ್ಲಿ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದ ಹಿನ್ನೆಲೆಯಲ್ಲಿ ಜೈಲು ಸೇರಿ ನಂತರ ಜಾಮೀನಿನ ಮೇಲೆ 20 ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ, ನಂತರ ಜೈಲಿನಲ್ಲಿ ಪರಿಚಯವಾಗಿದ್ದ ವ್ಯಕ್ತಿಯ ಭಾವಚಿತ್ರವನ್ನು ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ನನ್ನ ಬಾಸ್ ಎಂಬುದಾಗಿ ಹಾಕಿಕೊಂಡಿದ್ದನು. ಇದು ರವಿ ಪ್ರೀತಿಸುತ್ತಿದ್ದ ಅದೇ ಯುವತಿಯನ್ನು ಪ್ರೀತಿಸುತ್ತಿದ್ದ ಭರತ್ ಎಂಬ ಯುವಕನ್ನು ಕೆರಳಿಸಿದೆ. ಭರತ್ ಸಹ ಅದೇ ಯುವತಿಯನ್ನು ಪ್ರೀತಿಸುತ್ತಿದ್ದು, ತನ್ನ ಹುಡುಗಿಯನ್ನು ರವಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆಂಬ ಉದ್ದೇಶದಿಂದ ತನ್ನ ಸ್ನೇಹಿತರಾದ ಪವನ್, ಭರತ್, ತಿಪ್ಪೇಶ ಮತ್ತು ಅನಿಲ್, ಸುರೇಶ್ ಮತ್ತು ಸಾಗರ್ ಎಂಬುವವರೊಂದಿಗೆ ಸೇರಿಕೊಂಡು ಜ. 11 ರಂದು ರಾತ್ರಿ ಸಮಯದಲ್ಲಿ ರವಿಯನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಕರಡೀಪುರದ ಗುಟ್ಟೆಯ ಬಳಿಯ ಬೈಪಾಸ್ ರಸ್ತೆಯಲ್ಲಿ ರವಿಯ ಜೊತೆ ಜಗಳ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ಆರೋಪಿ ಭರತ್ ತನ್ನ ಆಟೋದಲ್ಲೇ ರವಿ ಮೃತ ದೇಹವನ್ನು ಹಾಕಿಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿ ಬೈಪಾಸ್ ರಸ್ತೆಯಲ್ಲಿ ಅಪಘಾತವಾಗಿತ್ತು ಎಂದು ಬಿಂಬಿಸಿ ನಾಟಕವಾಡಿದ್ದಾನೆ. ಆದರೆ ಪೊಲೀಸರು ನಡೆಸಿದ ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬಂದಿದ್ದು, ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪವನ್ ಸತ್ ನಾಯಿ, ಭರತ್, ತಿಪ್ಪೇಶ ಮತ್ತು ಅನಿಲ್ ರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್, ಹೆಚ್ಚುವರಿ ಎಸ್ಪಿ ಉದೇಶ್ ಅವರ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ನೇತೃತ್ವದಲ್ಲಿ ಕೊಲೆ ಪ್ರಕರಣವನ್ನು ತ್ವರಿತವಾಗಿ ಬೇದಿಸುವಲ್ಲಿ ಯಶಸ್ವಿಯಾದ ಸಿಪಿಐ ಸರ್ದಾರ್, ಪಿಎಸ್ಐ ಲಕ್ಷ್ಮೀ ನಾರಾಯಣ ಮತ್ತು ಸಿಬ್ಬಂದಿ ನಟರಾಜು, ರಂಗೇಗೌಡರನ್ನು ಎಸ್ಪಿ ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!