ಮಹಿಳೆ ಸರ ದೋಚಿ ಪರಾರಿ

427

Get real time updates directly on you device, subscribe now.

ಕುಣಿಗಲ್‌: ಅನಾಥಾಶ್ರಮಕ್ಕೆ ದಾನ ಕೇಳುವ ನೆಪದಿ ಒಂಟಿ ಮಹಿಳೆಯ ಚಿನ್ನದ ಸರ ದುಷ್ಕರ್ಮಿಗಳು ದೋಚಿರುವ ಘಟನೆ ನಡೆದಿದೆ. ಕುಣಿಗಲ್‌ ಪೊಲೀಸ್‌ಠಾಣಾ ವ್ಯಾಪ್ತಿಯ ಹೊನ್ನೇಗೌಡನಪಾಳ್ಯದ ಪಾರ್ವತಿ (28) ಮನೆಗೆ ಅನಾಥಶ್ರಮಕ್ಕೆ ವಸ್ತು ಸಂಗ್ರಹಿಸುವ ನೆಪದಿ ಬಂದ ದುಷ್ಕರ್ಮಿಗಳು, ಮಹಿಳೆ ರಾಗಿ ನೀಡುವುದಾಗಿ ಹೇಳಿದಾಗ, ರಾಗಿ ನಿರಾಕರಿಸಿ ಎಲ್ಲರೂ ಹಣ ನೀಡಿದ್ದಾರೆ ಎಂದು ರಶೀದಿ ಪುಸ್ತಕ ತೋರಿಸುವ ನೆಪದಿ ಮಹಿಳೆಗೆ ರಸಾಯನಿಕ ಬಳಸಿ ಪ್ರಜ್ಞೆ ತಪ್ಪಿಸಿ ಆಕೆ ಧರಿಸಿದ್ದ 40ಗ್ರಾಂ. ಚಿನ್ನದ ಸರ ಹಾಗೂ ಮನೆಯಲ್ಲಿದ್ದ ನಾಲ್ಕು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಸಂಬಂಧಿಯೊಬ್ಬರು ಮನೆಗೆ ಬಂದು ನೋಡಿ, ಪ್ರಜ್ಞೆ ತಪ್ಪಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಕುಣಿಗಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!