ನೊಂದ ಕುಟುಂಬಕ್ಕೆ ಲಿಂಗದಹಳ್ಳಿ ಚೇತನ್ ಕುಮಾರ್ ನೆರವು

203

Get real time updates directly on you device, subscribe now.

ಶಿರಾ: ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ, ಆತ್ಮವಿಶ್ವಾಸದಿಂದ ಬದುಕಿ ಸಮಸ್ಯೆ ಜಯಿಸಬೇಕು ಎಂದು ಜೆಡಿಎಸ್ ಯುವ ಮುಖಂಡ, ಸ್ಪರ್ಧಾಗೈಡ್ ಸಂಪಾದಕ ಲಿಂಗದಹಳ್ಳಿ ಚೇತನ್ ಕುಮಾರ್ ಹೇಳಿದರು.

ಈಚೆಗೆ ತಾವರೆಕೆರೆ ಜಿಪಂ ವ್ಯಾಪ್ತಿಯ ಬಂದಕುಂಟೆ ಗ್ರಾಮದಲ್ಲಿ ದಲಿತ ಕುಟುಂಬದ ಮಂಜುನಾಥ್ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದರು, ಮಂಜುನಾಥ್ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು ಜೀವನ ನಿರ್ವಹಣೆ ದುಸ್ತರವಾಗಿದೆ, ಈ ವೇಳೆ ಲಿಂಗದಹಳ್ಳಿ ಚೇತನ್ ಕುಮಾರ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಮಾನಸಿಕವಾಗಿ ದುರ್ಬಲರಾದವರು ಬಲವಂತವಾಗಿ ಸಾವು ತಂದುಕೊಳ್ಳುತ್ತಾರೆ, ಜನರು ಸಾವು ನಿಗ್ರಹಿಸುವ ಶಕ್ತಿ ಪಡೆಯಬೇಕು. ಯಾವುದೇ ಸಮಸ್ಯೆ ಎದುರಿಸುವ ಆತ್ಮಸ್ಥೈರ್ಯ ಬರಬೇಕು, ಆತ್ಮಹತ್ಯೆಗೆ ವಯಸ್ಸಿನ ಅಂತರವಿಲ್ಲ, ಆತ್ಮಹತ್ಯೆಯು ಅಪರಾಧವಾಗಿದೆ ಎಂದು ಹೇಳಿದರು.
ಸಾಲಬಾಧೆಯಿಂದ ಈಗಾಗಲೇ ಶಿರಾ ತಾಲೂಕಿನಲ್ಲಿ ಸಾಕಷ್ಟು ಮಂದಿ ಆತ್ಮಹತ್ಯೆಗೆ ಶರಣಾಗಿರುವುದು ವಿಷಾಧದ ಸಂಗತಿ ಎಂದು ನುಡಿದರು.
ಇದೇ ವೇಳೆ ಕುಟುಂಬ ನಿರ್ವಹಣೆ 10 ಸಾವಿರ ಆರ್ಥಿಕ ಸಹಾಯ ಮಾಡಿ, ಏನೇ ಸಮಸ್ಯೆ ಇದ್ದರೂ ಸಂಪರ್ಕಿಸುವಂತೆ ಸಲಹೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!