ಚಿರತೆ ದಾಳಿಗೆ ಮೇಕೆ ಬಲಿ

202

Get real time updates directly on you device, subscribe now.

ಕೊರಟಗೆರೆ: ತಾಲ್ಲೂಕಿನ ಬೈರೇನಹಳ್ಳಿ ಗ್ರಾಮದ ನದಿಯ ದಡದಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ನಡೆದಿದೆ.

ಬೈರೇನಹಳ್ಳಿ ಗ್ರಾಮದ ಕರೆತಿಮ್ಮಯ್ಯ ಅವರಿಗೆ ಸೇರಿದ ಮೇಕೆಗಳು ಮೇಯಿತ್ತಿದ್ದವು, ಸಂಜೆಯಾದ ಕಾರಣ ಮನೆ ಕಡೆ ಬರುವ ಸಂದರ್ಭದಲ್ಲಿ ಚಿರತೆಯೊಂದು ಏಕಾಏಕಿ ಮೇಕೆಗಳ ಗುಂಪಿನ ಮೇಲೆ ದಾಳಿ ಮಾಡಿದ ಪರಿಣಾಮ ಒಂದು ಮೇಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಿರತೆ ದಾಳಿ ಕಂಡ ರೈತ ಕರೆತಿಮ್ಮಯ್ಯ ಉಳಿದ ಮೇಕೆಗಳನ್ನು ಗಾಬರಿಯಿಂದ ಓಡಿಸಿದಾಗ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.
ಘಟನೆ ನಡೆದು ತುಂಬಾ ಸಮಯವಾದರೂ ಸ್ಥಳಕ್ಕೆ ಅರಣ್ಯಾಧಿಕಾರಿಗಳಾಗಲಿ ಮತ್ತು ವೈದ್ಯರಾಗಲಿ ಭೇಟಿ ನೀಡಿಲ್ಲ, ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಪರಿಹಾರ ಒದಗಿಸಲಿ, ಚಿರತೆ ದಾಳಿ ತಡೆಗೆ ಕ್ರಮ ವಹಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!