ಮಗಳ ಮದುವೆ ದಿನವೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಅಪ್ಪ

431

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ಬೆಂಡೇಕೆರೆ ಗ್ರಾಮದಲ್ಲಿ ಮಗಳ ಮದುವೆಯ ಸಂಭ್ರಮದಲ್ಲಿದ್ದ ತಂದೆ ಮದುವೆ ಮಂಟಪದಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ತಾಲೂಕಿನ ದಬ್ಬೇಘಟ್ಟ ಬೆಂಡೇಕೆರೆ ಗ್ರಾಮದ ವೆಂಕಟೇಶ್‌ ತಮ್ಮ ಮಗಳ ಮದುವೆಯನ್ನು ತಮ್ಮ ಸ್ವಗ್ರಾಮದಲ್ಲೇ ಏರ್ಪಡಿಸಿದ್ದರು. ತಮ್ಮ ಮಗಳನ್ನು ವರನಿಗೆ ಧಾರೆಯೆರೆಯುವ ಶಾಸ್ತ್ರ ಮುಗಿಸಿ ಗಂಡಿನ ಮನೆಗೆ ಕಳುಹಿಸಿಕೊಡುವ ತಯಾರಿ ನಡೆಸಿದ್ದರು. ಆ ವೇಳೆ ಹಠಾತ್‌ ವಧು ತಂದೆ ವೆಂಕಟೇಶ್‌ ಮದುವೆ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದರಾದರೂ ಚಿಕಿತ್ಸೆ ಫಲಿಸದೇ ವೆಂಕಟೇಶ್‌ ಮೃತಪಟ್ಟರೆಂದು ತಿಳಿದು ಬಂದಿದೆ. ಸಂಭ್ರಮದ ಮನೆಯಲ್ಲಿ ಸೂತಕ ಹರಡಿತು. ಮದುವೆ ಸಂಭ್ರಮದಲ್ಲಿರಬೇಕಾದ ಬಂಧುಗಳು ಶೋಕ ಸಾಗರದಲ್ಲಿ ಮುಳುಗಿದರು. ಮೃತರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪದ್ಮಾ ಅವರ ಪತಿಯಾಗಿದ್ದಾರೆ.
ಮೃತರ ನಿಧನಕ್ಕೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಹೆಚ್‌.ಬಿ.ನಂಜೇಗೌಡ, ದಬ್ಬೆಘಟ್ಟ ಗ್ರಾಪಂ ಅದ್ಯಕ್ಷ ಡಿ.ಜೆ.ನಂಜೇಗೌಡ, ಜೆಡಿಎಸ್ ಅಧ್ಯಕ್ಷ ಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ರಮೇಶ್‌ಗೌಡ, ಕಾಂಗ್ರೆಸ್‌ ಮುಖಂಡ ಚೌದ್ರಿರಂಗಪ್ಪ, ಸುಬ್ರಹ್ಮಣ್ಯ ಶ್ರೀಕಂಠೇಗೌಡ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!