ಕಳ್ಳರ ಕೈಚಳಕ ಚೈನ್ ಎಸ್ಕೇಪ್

260

Get real time updates directly on you device, subscribe now.

ಕುಣಿಗಲ್‌: ಪಟ್ಟಣದಲ್ಲಿ ಸೋಮವಾರ ಒಂದೆ ದಿನ ಎರಡು ಕಡೆಗಳಲ್ಲಿ ಸರಗಳ್ಳರ ಕೈಚಳಕಕ್ಕೆ ಇಬ್ಬರು ಚಿನ್ನಾಭರಣ ಕಳೆದುಕೊಂಡು ಪೊಲೀಸರಿಗೆ ದೂರು ನೀಡಿರುವ ಘಟನೆ ನಡಡೆದಿದೆ.

ಪಟ್ಟಣದ 12ನೇ ವಾರ್ಡ್‌ನಲ್ಲಿ ಸೋಮವಾರ ಬೆಳಗ್ಗೆ 9 ಗಂಟೆ ಪ್ರಮೀಳಮ್ಮ ಎಂಬುವರ ಮನೆಮುಂದೆ ತೆಂಗಿನಕಾಯಿ ಕೀಳಿಸಲು ಹೊರಗಡೆ ನಿಂತಿರುವಾಗ, ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸಮೀಪಕ್ಕೆ ಬಂದ ಅಪರಿಚಿತ ವಕೀಲರೊಬ್ಬರ ಮನೆ ವಿಳಾಸ ಎಲ್ಲಿ ಎಂದು ಕೇಳುತ್ತಾ ಹತ್ತಿರ ಬಂದು ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾನೆ. ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡ ಮೇರೆಗೆ ಅರ್ಧಸರ ಕತ್ತಿನಲ್ಲೆ ಉಳಿದಿದ್ದು 40 ಗ್ರಾಂ ಚಿನ್ನದ ಸರ ಕಳುವಾಗಿದೆ ಎಂದು ದೂರು ನೀಡಿದ್ದಾರೆ.
ಸೋಮವಾರ 12 ಗಂಟೆ ವೇಳೆಯಲ್ಲಿ ಹೆಗ್ಗಡತಿಹಳ್ಳಿ ಗ್ರಾಮದ ವಾಸಿ ರಮೇಶ್‌ ಎಂಬಾತ ಕಾರ್ಪೋರೇಶನ್‌ ಬ್ಯಾಂಕಿನಲ್ಲಿ ಅಡವಿಟ್ಟಿದ್ದ 40 ಗ್ರಾಂ ಅವಲಕ್ಕಿ ಸರ ಬಿಡಿಸಿಕೊಂಡು, ಬೈಕ್‌ನಲ್ಲಿರಿಸಿ ಜನೌಷಧ ಕೇಂದ್ರದಲ್ಲಿ ಔಷಧಿ ತೆಗೆದುಕೊಂಡು ಬಂದು ನೋಡಿದಾಗ ಚಿನ್ನಾಭರಣ ಕಾಣೆಯಾಗಿದೆ ಘಟನೆಗೆ ಸಂಬಂಧಿಸಿದಂತೆ ಕುಣಿಗಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!