ಹೊತ್ತಿ ಉರಿದ ಕಾರು

263

Get real time updates directly on you device, subscribe now.

ಕುಣಿಗಲ್‌: ಕಾರ್ಯ ನಿಮಿತ್ತ ತಾಲೂಕು ಕಚೇರಿಗೆ ಆಗಮಿಸಿ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರು ದಿಡೀರ್‌ ಹೊತ್ತಿ ಉರಿದ ಪರಿಣಾಮ ತಾಲೂಕು ಕಚೇರಿ ಆವರಣದಲ್ಲಿ ಕೆಲಕಾಲ ಆತಂಕ ಉಂಟಾದ ಘಟನೆ ಮಂಗಳವಾರ ನಡೆಯಿತು.

ತಾಲೂಕಿನ ಬಿದನಗೆರೆ ಗ್ರಾಮದ ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಚಂದ್ರಯ್ಯ ಎಂಬಾತ ತನ್ನ ಟಾಟಾ ಇಂಡಿಗೋ ಕಾರಿನಲ್ಲಿ ಮಂಗಳವಾರ ಬೆಂಗಳೂರಿನಿಂದ ತಾಲೂಕು ಕಚೇರಿಯಲ್ಲಿ ಕೆಲಸವಿದ್ದ ಮೇರೆಗೆ ಆಗಮಿಸಿ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ ಮಧ್ಯ ಇರುವ ತಾಲೂಕು ಕಚೇರಿಯ ಹಳೆಕಟ್ಟಡದ ಪಕ್ಕದಲ್ಲಿರುವ ಮರದ ಕೆಳಗೆ ನಿಲ್ಲಿಸಿದ್ದರು. ಮರದಿಂದ ಎಲೆ ಉದುರಿದ್ದ ಕಾರಣ ಕಾರಿನ ಕೆಳಗೆ ಒಣಗಿದ ಎಲೆ ಸಂಗ್ರಹ ಹೆಚ್ಚಿದ್ದು, ಕಾರು ನಿಲ್ಲಿಸಿದ ಸ್ವಲ್ಪ ಹೊತ್ತಿಗೆ ಕಾರಿನ ಮುಂಭಾದ ಎಂಜಿನ್‌ ಬಳಿ ದಿಡೀರ್‌ ಬೆಂಕಿ ಹೊತ್ತಿಕೊಂಡಿದ್ದು, ಇದರಿಂದ ಎರಡೂ ಕಚೇರಿಯಲ್ಲಿ ಕೆಲಕಾಲ ಆತಂಕ ಉಂಟಾಗಿದ್ದು, ಸಾರ್ವಜನಿಕರು ಅಗ್ನಿಶ್ಯಾಮಕ ಠಾಣೆಗೆ ಕರೆ ಮಾಡಿದ ಮೇರೆಗೆ ಅಗ್ನಿಶ್ಯಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಭಾಗಶಃ ಕಾರು ಸುಟ್ಟು ಕರಕಲಾಗಿದೆ.

Get real time updates directly on you device, subscribe now.

Comments are closed.

error: Content is protected !!