ಬಜರಂಗದಳ ಕಾರ್ಯಕರ್ತನ ಕೊಲೆಗೆ ಖಂಡನೆ

298

Get real time updates directly on you device, subscribe now.

ಕುಣಿಗಲ್: ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಪಟ್ಟಣದಲ್ಲಿ ಸೋಮವಾರ ಸಂಜೆ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.

ಹುಚ್ಚಮಾಸ್ತಿಗೌಡ ವೃತ್ತದಲ್ಲಿ ದಳದ ಕುಣಿಗಲ್ ಪ್ರಖಂಡದ ಸಂಚಾಲಕ ರಾಮು ನೇತೃತ್ವದಲ್ಲಿ ಸಂಘಟಿತಗೊಂಡ ಕಾರ್ಯಕರ್ತರು ಘಟನೆ ಖಂಡಿಸಿದರು.
ಈ ವೇಳೆ ರಾಮು ಮಾತನಾಡಿ, ಹಿಂದೂ ಕಾರ್ಯಕರ್ತರ ಕೊಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಹಿಜಾಬ್ ಸಮಸ್ಯೆಯ ಹಿನ್ನೆಲೆಯಲ್ಲಿ ಹರ್ಷ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ, ಸರ್ಕಾರ ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡುವ ಜೊತೆಯಲ್ಲಿ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು, ಹರ್ಷನ ಕೊಲೆ ಮಾಡಿದ ಹಂತಕರ ಪತ್ತೆ ಹಚ್ಚಿ ಗಲ್ಲು ಶಿಕ್ಷೆ ವಿಧಿಸಿ, ಮೃತ ಹರ್ಷನ ಮನೆಯವರಿಗೆ ಕೂಡಲೆ ಸೂಕ್ತ ಪರಿಹಾರ ನೀಡಬೇಕು, ಸರ್ಕಾರ ಹಿಂದೂ ಕಾರ್ಯಕರ್ತರ ಕೊಲೆ ನಿಯಂತ್ರಿಸಲು ವಿಫಲವಾದಲ್ಲಿ ಬಜರಂಗದಳದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಹ ಸಂಚಾಲಕ ಗಿರೀಶ್, ಪ್ರಮುಖರಾದ ಕಾರ್ತೀಕ್, ರವೀಶ್, ಪವನ್, ಸುನಿಲ್, ನವೀನ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!