ಶಿರಾದಲ್ಲಿ ಕರೋನ ರೋಗ ನಿವಾರಣೆಗಾಗಿ ಧನ್ವಂತರಿ ಮಹಾವಿಷ್ಣು ಹೋಮ

131

Get real time updates directly on you device, subscribe now.

ಶಿರಾದಲ್ಲಿ ಕರೋನ ರೋಗ ನಿವಾರಣೆಗಾಗಿ ನಗರದ ಲಕ್ಷ್ಮೀನಾರಾಯಣಸ್ವಾಮಿ ದೇಗುಲದಲ್ಲಿ ಧನ್ವಂತರಿ ಮಹಾವಿಷ್ಣು ಹೋಮಾದಿಗಳು ನೆರವೇರಿಸಲಾಯಿತು.

ಶಿರಾ: ಕರೋನ ವೈರಸ್ ನಿಂದ ವಿಶ್ವವೇ ಅನಾರೋಗ್ಯದಿಂದ ಬಳಲುತ್ತಿದೆ. ಭಾರತ ದೇಶಕ್ಕೂ ವ್ಯಾಪಿಸಿ ಸಾಕಷ್ಟು ಸಾವು ನೋವುಗಳನ್ನು ಸೃಷ್ಟಿಸಿದೆ. ಈ ಅತಂತ್ರ ಪರಿಸ್ಥಿತಿ ಬೇಗ ನಿವಾರಣೆಯಾಗಲಿ, ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳು ಕೊನೆಯಾಗಲಿ ಎಂದು ನಗರದ ಲಕ್ಷ್ಮಿನಾರಾಯಣಸ್ವಾಮಿ ದೇಗುಲದಲ್ಲಿ ಧನ್ವಂತರಿ ಮಹಾವಿಷ್ಣು ಹೋಮ ನೆರವೇರಿಸಲಾಯಿತು.
ದೇವಳದ ಪ್ರಧಾನ ಅರ್ಚಕ ಸತ್ಯನಾರಾಯಣಶರ್ಮ ಅವರ ನೇತೃತ್ವದಲ್ಲಿ ಹೋಮಾದಿ ಕೈಂಕರ್ಯಗಳು ನೆರವೇರಿಸಲಾಯಿತು. ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಜಿ.ಎಲ್.ರಾಮಣ್ಣ, ಸುಧೀಂದ್ರ ಜೋಯಿಸ್, ಕೃಷ್ಣಶರ್ಮ, ಶ್ರೀಹರಿ ಶರ್ಮ, ವೆಂಕಟರಂಗ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!