ಬಸ್‌ಗೆ ಬೆಂಕಿ: ತಪ್ಪಿದ ಅನಾಹುತ

101

Get real time updates directly on you device, subscribe now.

ಮಧುಗಿರಿ: ನಿಲುಗಡೆಯಾಗಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದಾಗ ಪಿಎಸ್ಐ ಕಾಂತರಾಜು ಅವರ ಸಮಯ ಪ್ರಜ್ಞೆಯಿಂದ ದುರಂತವೊಂದು ಶುಕ್ರವಾರ ತಪ್ಪಿದಂತಾಗಿದೆ.
ಗೌರಿಬಿದನೂರು ರಸ್ತೆಯ ಅಯ್ಯಪ್ಪ ಸ್ವಾಮಿ ಬಡಾವಣೆ ತಿರುವಿನಲ್ಲಿ ಖಾಸಗಿ ಬಸ್‌ ಅನ್ನು ನಿಲುಗಡೆ ಮಾಡಿ ಕಿಡಿಗೇಡಿಗಳು ಬೇಲಿಗೆ ಬೆಂಕಿ ಹಚ್ಚಿದ್ದಾರೆ. ಆ ಬೆಂಕಿ ಬಸ್‌ಗೆ ಹೊತ್ತಿಕೊಂಡು ಉರಿಯುತ್ತಿದ್ದದ್ದು ಪಿಎಸ್ಐ ಕಾಂತರಾಜು ಅವರಿಗೆ ಕಂಡಿದೆ. ತಕ್ಷಣ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದರು. ಕಾರ್ಯಪ್ರೌವೃತ್ತರಾದ ಸಿಬ್ಬಂದಿ ಬೆಂಕಿ ನಂದಿಸಿದರು.

Get real time updates directly on you device, subscribe now.

Comments are closed.

error: Content is protected !!