ಹೆಂಡತಿ ಕಾಲು ಕತ್ತರಿಸಿದ ಗಂಡ

359

Get real time updates directly on you device, subscribe now.

ತುಮಕೂರು: ನಗರದ ಲಾಡ್ಜ್ವೊಂದರಲ್ಲಿ ತನ್ನ ಪತ್ನಿಯ ಕಾಲನ್ನೇ ಕತ್ತರಿಸಿದ್ದಾನೆ, ಬಳಿಕ ಲಾಜ್ಡ್ ಮಾಲೀಕರ ಬಳಿ ಬಂದು ಹೆಂಡತಿಯ ಕಾಲು ಕತ್ತರಿಸಿದ್ದಾನೆ, ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕು, ನಾಲ್ವರು ಹುಡುಗರನ್ನು ಕಳುಹಿಸಿ ಎಂದಿದ್ದಾನೆ, ಅಷ್ಟೇ ಅಲ್ಲದೆ ತನ್ನ ಹೊಟ್ಟೆಗೆ ತಾನೇ ಚಾಕುವಿನಿಂದ ಇರಿದು ಕೊಂಡಿದ್ದಾನೆ.

ಇAತಹ ಅಮಾನುಷ ಘಟನೆ ತುಮಕೂರಿನ ಅಶೋಕ ಲಾಡ್ಜ್ ಆ್ಯಂಡ್ ಹೋಟೆಲ್ನಲ್ಲಿ ಬುಧವಾರ ನಡೆದಿದೆ, ಗಂಡನಿಂದ ಹಲ್ಲೆಗೆ ಒಳಗಾದಾಕೆ ಹೆಸರು ಅನಿತಾ, ಈಕೆಯ ಗಂಡ ಬಾಬು ಆರೋಪಿ, ನಾಲ್ಕು ವರ್ಷದ ಹಿಂದೆ ಮಧುಗಿರಿ ಮೂಲದ ಅನಿತಾಳನ್ನು ಗದಗ ಮೂಲದ ಬಾಬು ಮದುವೆ ಆಗಿದ್ದ, ಬುಧುವಾರ ಬೆಳಗ್ಗೆ ೬ ಗಂಟೆಗೆ ಅಶೋಕ್ ಲಾಡ್ಜ್ಗೆ ಬಂದ ದಂಪತಿ ರೂಂ ಪಡೆದಿದ್ದರು.
ಕೊಲೆ ಮಾಡುವ ಉದ್ದೇಶದಿಂದಲೇ ಲಾಡ್ಜ್ಗೆ ಹೆಂಡತಿಯನ್ನು ಕರೆದುಕೊಂಡು ಬಂದಿದ್ದ ಬಾಬು, ಬ್ಯಾಗ್ನಲ್ಲಿ ಮಚ್ಚು ತಂದಿದ್ದ, ಈ ಬಗ್ಗೆ ಅರಿವಿರದ ಪತ್ನಿ ಖುಷಿಯಿಂದಲೇ ಬಂದಿದ್ದಳು, ಕೆಲವೇ ಭಾಷಣದಲ್ಲಿ ಮಚ್ಚಿನಿಂದ ಪತ್ನಿಯ ಕಾಲನ್ನು ಕತ್ತರಿ ಬಳಿಕ ತನ್ನ ಹೊಟ್ಟೆಗೆ ಚಾಕು ಚುಚ್ಚಿಕೊಂಡಿದ್ದಾನೆ, ಈ ಘಟನೆ ಸಂಬಂಧ ಕೂಡಲೇಹೋಟೆಲ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಬಾಬುನನ್ನು ಬಂಧಿಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿಯ ಕಾಲು ಕತ್ತರಿಸಿದ್ದರ ಉದ್ದೇಶವೇನು? ಯಾವ ಕಾರಣಕ್ಕೆ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂಬುದು ತನಿಖೆ ಬಳಿಕ ಗೊತ್ತಾಗ ಬೇಕಿದೆ.

Get real time updates directly on you device, subscribe now.

Comments are closed.

error: Content is protected !!