ಬೈಕ್, ಬಸ್ ನಡುವೆ ಡಿಕ್ಕಿ- ವ್ಯಕ್ತಿ ಸಾವು

319

Get real time updates directly on you device, subscribe now.

ಪಾವಗಡ: ದ್ವಿಚಕ್ರ ವಾಹನ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ತಾಲ್ಲೂಕಿನ ಬುಡ್ಡಾರೆಡ್ಡಿಹಳ್ಳಿ ಟೋಲ್ ಸಮೀಪ ಬುಧವಾರ ಮಧ್ಯಾಹ್ನ ನಡೆದಿದೆ.

ಆಂದ್ರದ ಕಂಬದೂರು ಬಳಿಯ ಕದಿರೇದೇವರಹಳ್ಳಿ ಮೂಲದ ರಾಮಮೂರ್ತಿ (೪೨) ಮೃತಪಟ್ಟ ದುರ್ದೈವಿ, ಹಿಂಬದಿ ಸವಾರನ ಪರಿಸ್ಥಿತಿ ಗಂಭೀರವಾಗಿತ್ತು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳಹಿಸಲಾಯಿತು.
ಪಾವಗಡದಿಂದ ವೈ.ಎನ್.ಹೊಸಕೋಟೆ ಕಡೆಗೆ ಹೋಗುತ್ತಿದ್ದ ವೆಂಕಟೇಶ್ವರ ಬಸ್ ಗೆ ಕಂಬದೂರು ಭಾಗದಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರು ನೇರವಾಗಿ ಮುಖಿ ಮುಖಿಯಾಗಿ ಈ ಅವಘಡ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಭಾರತಿ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!