ಕಿಡಿಗೇಡಿಗಳಿಂದ ಬೈಕ್ ಗಳಿಗೆ ಬೆಂಕಿ

335

Get real time updates directly on you device, subscribe now.

ವೈ.ಎನ್.ಹೊಸಕೋಟೆ: ಗ್ರಾಮದ ಚೌಡೇಶ್ವರಿ ಕಾಲೋನಿಯಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿರುವ ಘಟನೆಗಳು ಕಳೆದ ಎರಡು ದಿನಗಳಿಂದ ನಡೆಯುತ್ತಿವೆ.

ಚೌಡೇಶ್ವರಿ ಕಾಲೋನಿಯಲ್ಲಿ ತೊಗಟ ಜನಾಂಗದ ವಾಸವಿರುವ ಬಿ.ಸಿ.ಬಾಲಾಜಿ ಅವರಿಗೆ ಸೇರಿದ ಡಿಯೋ ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ವಾಹನ ಸಂಪೂರ್ಣ ಸುಟ್ಟಿದೆ.
ಅದರಂತೆ ಈ ಘಟನೆ ಮಾಸುವ ಮುನ್ನವೇ ಬುಧವಾರ ರಾತ್ರಿ ಇದೇ ಕಾಲೋನಿಯ ಶ್ರೀಧರ್ ಅವರಿಗೆ ಸೇರಿದ ಪಲ್ಸರ್ ಬೈಕ್ ಬೆಂಕಿಗೆ ಆಹುತಿಯಾಗಿದೆ.
ಈ ಘಟನೆಯಿಂದ ಗ್ರಾಮದಲ್ಲಿ ಜನತೆ ಭಯಬೀತರಾಗಿದ್ದು, ತಮ್ಮ ವಾಹನಗಳನ್ನು ತಮ್ಮ ಮನೆ ಮುಂದೆ ನಿಲ್ಲಿಸಲು ಹಿಂಜರಿಯುತ್ತಿದ್ದಾರೆ.

Get real time updates directly on you device, subscribe now.

Comments are closed.

error: Content is protected !!