ಕಿಡಿಗೇಡಿಗಳಿಂದ ಕಾರ್ ಗೆ ಬೆಂಕಿ

483

Get real time updates directly on you device, subscribe now.

ವೈ.ಎನ್.ಹೊಸಕೋಟೆ: ಗ್ರಾಮದ ಚೌಡೇಶ್ವರಿ ದೇವಾಲಯ ಹಿಂಭಾಗದ ರಸ್ತೆಯಲ್ಲಿ ಬಂಡೆ ಕಾಂಪೌಂಡಿನ ಒಳಗಡೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಗ್ರಾಮದ ಎ೩ ವಿಭಾಗದ ವಾಸಿಯಾದ ಸತ್ಯನಾರಾಯಣಚಾರಿಗೆ ಸೇರಿದ ಕಾರಿಗೆ ಹೊದಿಸಿದ್ದ ಟಾರ್ಪಲ್ ಗೆ ಬೆಂಕಿ ತಗುಲಿ ಹೊರ ಭಾಗದಲ್ಲಿನ ಹಲವು ಭಾಗಗಳು ಸುಟ್ಟು ಹೋಗಿವೆ. ಕಾರು ಹೊತ್ತಿ ಉರಿಯುತ್ತಿರುವುದನ್ನು ಕಂಡ ಪಕ್ಕದ ಮನೆಯರು ಬೆಂಕಿ ನಂದಿಸಿದ್ದಾರೆ, ಬೇಗ ಎಚ್ಚೆತ್ತುಕೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ಆದಾಗ್ಯೂ ಸುಮಾರು ೨ ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಪಿಎಸ್ಐ ಭಾರತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!