ಹುಂಡಿ ಕದ್ರು, ಮತ್ತೆ ವಾಪಸ್ ಇಟ್ರು

246

Get real time updates directly on you device, subscribe now.

ಕುಣಿಗಲ್: ದೇವರ ಭಯದಿಂದಾಗಿ ಕದ್ದ ಹುಂಡಿಗಳನ್ನು ಬೆಟ್ಟದ ಕೆಳಗಿನ ಆಂಜನೇಯ ಸ್ವಾಮಿ ದೇವಾಲಯದ ಬಳಿ ಇಟ್ಟು ಹೋಗಿರುವ ಘಟನೆ ವರದಿಯಾಗಿದೆ.
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿನ ಹುಂಡಿಗಳನ್ನು ಕಳೆದ ಕೆಲ ದಿನದ ಹಿಂದೆ ಕಳುವು ಮಾಡಲಾಗಿತ್ತು, ಘಟನೆಗೆ ಸಂಬಂಧಿಸಿದಂತೆ ದೇವಾಲಯ ಸಮಿತಿಯವರು ಕಳೆದ ಶನಿವಾರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಕ್ರಮ ಕೈಗೊಂಡಿದ್ದರು, ಆದರೆ ಸೋಮವಾರ ಬೆಳಗಿನ ಜಾವ ಕಳವಾದ ಹುಂಡಿಗಳನ್ನು ಬೆಟ್ಟದ ಕೆಳಗಿನ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಇಟ್ಟು ಹೋಗಿದ್ದರು. ಗ್ರಾಮಸ್ಥರು ವಿಷಯ ತಿಳಿಸಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಕುಣಿಗಲ್ ಸಿಪಿಐ ಡಿ.ಎಲ್.ರಾಜು ಹುಂಡಿ ಪರಿಶೀಲಿಸಿದಾಗ, ಹುಂಡಿಯ ಬೀಗ ಹೊಡೆಯದೆ ಹಾಗೆ ಇದ್ದು, ಹುಂಡಿಗಳನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!