ಶ್ವಾನ ಬೇಟೆಯಾಡಿದ ಚೀತಾ!

375

Get real time updates directly on you device, subscribe now.

ಕೊರಟಗೆರೆ: ರೈತನ ತೋಟದ ಮನೆಯಲ್ಲಿ ಸಾಕಲಾಗಿದ್ದ ನಾಯಿಯನ್ನು ತಡರಾತ್ರಿ ಚಿರತೆಯೊಂದು ಹೊಂಚು ಹಾಕಿ ಬೇಟೆ ಆಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದ ರೈತ ನರಸಿಂಹರಾಜು ಎಂಬಾತನ ತೋಟದ ಮನೆಯ ಹತ್ತಿರ ಚಿರತೆಯೊಂದು ನಾಯಿಯ ಮೇಲೆ ದಾಳಿ ನಡೆಸಿದೆ. ಮತ್ತೊಂದು ನಾಯಿಯು ಅದರ ಹಿಂದೆಯೇ ಸಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈಗಾಗಲೇ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಐದಾರು ಗ್ರಾಮಗಳಲ್ಲಿನ ಬೀದಿ ನಾಯಿ, ಮೇಕೆ ಮತ್ತು ಕುರಿಗಳನ್ನು ಬೇಟಿಯಾಡಿದೆ. ರೈತರಲ್ಲಿ ಭಯವನ್ನುಉಂಟು ಮಾಡಿರುವ ಚಿರತೆಯನ್ನು ತಕ್ಷಣ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅರಣ್ಯಾಧಿಕಾರಿ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗಿದೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!