ಬೆಮೆಲ್ ರನ್ನು ಪ್ರಶ್ನಿಸಲು ಎಂ.ಟಿ.ಕೃಷ್ಣಪ್ಪ ಯಾರು?

218

Get real time updates directly on you device, subscribe now.

ತುರುವೇಕೆರೆ: ವಿಧಾನಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರನ್ನು ಯಾರು ಎಂದು ಕೇಳುತ್ತಿರುವ ಎಂ.ಟಿ.ಕೃಷ್ಣಪ್ಪ ಯಾರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಟಾಂಗ್ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣದಲ್ಲಿ ಸೋಮವಾರ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ನಮ್ಮ ಪಕ್ಷದ ನಾಯಕರಾದ ಬೆಮೆಲ್ ಕಾಂತರಾಜ್ ಬಗ್ಗೆ ಹಗುರವಾಗಿ ಕೃಷ್ಣಪ್ಪ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ, ಈ ಹಿಂದೆ ತಾಲೂಕಿಗೆ ಬೆಮೆಲ್ ಕಾಂತರಾಜ್ ಅವರನ್ನು ಮನೆ ಮನೆಗೆ ಪರಿಚಯಿಸಿದ್ದ ಎಂ.ಟಿ.ಕೃಷ್ಣಪ್ಪನವರೇ ಇದೀಗ ಬೆಮೆಲ್ ಯಾರು ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ, ನಮ್ಮ ತಾಲೂಕಿಗೆ ಬೆಮೆಲ್ ಕೊಡುಗೆ ಏನು ಎಂದು ಕೇಳುವ ಯಾವ ನೈತಿಕತೆಯೂ ಕೃಷ್ಣಪ್ಪನವರಿಗೆ ಇಲ್ಲ, ಕಳೆದ ೬ ವರ್ಷಗಳ ಅವಧಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ನೀಡಿದ ಕೊಡುಗೆ ಅಪಾರವಾಗಿದೆ, ಎಂ.ಟಿ.ಕೃಷ್ಣಪ್ಪ ಮೂರು ಬಾರಿ ಶಾಸಕರಾಗಿದ್ದ ವೇಳೆ ಹೊಡಿ ಬಡಿ ಸಂಸ್ಕೃತಿ ಪ್ರದರ್ಶಿಸಿದ್ದೇ ಇವರ ಸಾಧನೆ ಎಂದು ಲೇವಡಿ ಮಾಡಿದರು.
ಹಿರಿಯ ಮುಖಂಡ ದಾನಿಗೌಡ ಮಾತನಾಡಿ ನಮ್ಮ ಪಕ್ಷ ತಾಲೂಕಿನಲ್ಲಿ ೨೦ ವರ್ಷವಾದರೂ ಗೆಲುವು ಸಾಧಿಸದು ಎಂದು ಹೇಳಲು ಎಂ.ಟಿ.ಕೃಷ್ಣಪ್ಪ ಜ್ಯೋತಿಷಿಯೇ? ಬೆಮೆಲ್ ಕಾಂತರಾಜ್ ಅವರನ್ನು ಹಳ್ಳಿಗಳಿಗೆ ಕೂಡಬೇಡಿ, ಈ ತಾಲೂಕನ್ನು ಗುತ್ತಿಗೆ ಪಡೆದಿದ್ದಾರಾ, ಕ್ಷೇತ್ರದ ಜನತೆ ಈ ಬಾರಿಯೂ ಸೋಲಿಸಬಹುದೆಂಬ ಹತಾಶೆಯಿಂದ ಬಾಯಿಗೆ ಬಂದಂತೆ ಕೃಷ್ಣಪ್ಪ ಬಡಬಡಿಸುತ್ತಿದ್ದಾರೆ, ನಮ್ಮ ಪಕ್ಷದವರನ್ನು ಏಕವಚನದಲ್ಲಿ ಮಾತನಾಡುವುದನ್ನು ಕೃಷ್ಣಪ್ಪ ನಿಲ್ಲಿಸಿದ್ದರೆ ತಕ್ಕ ಶಾಸ್ತಿ ಮಾಡಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಿ.ಎಸ್.ಪುರ ಬ್ಲಾಕ್ ಅಧ್ಯಕ್ಷ ನಾಗೇಶ್, ಮಾಜಿ ಜಿಪಂ ಅಧ್ಯಕ್ಷ ಹನುಮಂತಯ್ಯ, ಪಿ.ಕಲ್ಲಳ್ಳಿ ಮಹಾಲಿಂಗಪ್ಪ, ಕೊಳಾಲ ನಾಗರಾಜ್, ಮಂಜೇಗೌಡ, ಪಪಂ ಮಾಜಿ ಅಧ್ಯಕ್ಷ ಶಶಿಶೇಖರ್, ಶ್ರೀನಿವಾಸ್, ಎಸ್ಸಿ ಘಟಕದ ಶಿವರಾಜ್, ಸುಬ್ರಹ್ಮಣ್ಯ, ಶೇಖರಪ್ಪ, ಜಾಫರ್, ತಾಪಂ ಮಾಜಿ ಸದಸ್ಯರಾದ ಬೈರಪ್ಪ, ಲಕ್ಷೀದೇವಮ್ಮ, ಸ್ವರ್ಣಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!