ಶ್ರೀಗಳ ಜಯಂತಿಗೆ ಸಕಲ ತಯಾರಿ

ಅಮಿತ್ ಷಾಗೆ ಎಸ್ಪಿಜೆ ಭದ್ರತೆ | ಎರಡು ಲಕ್ಷ ಭಕ್ತರ ಆಗಮನ ನಿರೀಕ್ಷೆ | ಸಿದ್ಧತೆ ವೀಕ್ಷಿಸಿದ ವಿಜಯೇಂದ್ರ

213

Get real time updates directly on you device, subscribe now.

ತುಮಕೂರು: ಲಿಂಗೈಕ್ಯ ಶ್ರೀಶಿವಕುಮಾರ ಸ್ವಾಮೀಜಿ ಅವರ ೧೧೫ನೇ ಜನ್ಮಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮ ಏ.೧ ನಡೆಯಲಿದ್ದು ಅಭೂತಪೂರ್ವ ವೇದಿಕೆ ಸಜ್ಜಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರೂ ತಪ್ಪಾಗಲಾರದು, ಈ ಜಯಂತಿ ಉತ್ಸವ ರೀತಿಯಲ್ಲಿ ನಡೆಯಬೇಕು. ಕಾರ್ಯಕ್ರಮಕ್ಕೆ ಸುಮಾರು ೨ ಲಕ್ಷ ಜನ ಬರುವ ಆಗಮಿಸುವ ನಿರೀಕ್ಷೆಯಿದೆ. ಪೊಲೀಸ್ ಇಲಾಖೆ ಎಸ್ಪಿಜೆ ಭದ್ರತೆಯಲ್ಲಿ ಸಕಲ ತಯಾರಿ ಮಾಡಿಕೊಂಡಿದೆ, ಬರುವ ಎಲ್ಲ ಭಕ್ತಾದಿಗಳಿಗೆ ಪ್ರಸಾದ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸಮಯೋಚಿತವಾಗಿ ಮಾಡಲಾಗಿದೆ. ರಾಷ್ಟ್ರ ಮುತ್ಸದ್ಧಿ ಗೃಹ ಸಚಿವ ಅಮಿತ್ ಶಾ ಅವರು ಏ.೧ ಬೆಳಗ್ಗೆ ೧೦.೩೦ ಗಂಟೆಗೆ ಶ್ರೀಮಠಕ್ಕೆ ಆಗಮಿಸಲಿದ್ದಾರೆ ಎಂದರು.
ಈ ಕ್ಷೇತ್ರದ ಮಹಿಮೆಯೇ ಜಗತ್ತಿಗೆ ತಿಳಿದಿದೆ, ರಾಜ್ಯದ ಅನೇಕ ಮಠದ ಶ್ರೀಗಳು ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ, ಈ ಮಠ ಎಲ್ಲಾ ಜಾತಿ ಮತಗಳನ್ನು ಮೀರಿದ್ದು ಎಂದರು.
ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆಡಳಿತ ಪಕ್ಷದ ಎಲ್ಲ ರಾಜಕೀಯ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ರೆಡ್ಡಿ ಹಾಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಪರಿಶೀಲನೆ ನಡೆಸಿದರು.
ಶ್ರೀಗಳ ಗದ್ದುಗೆ ಮಂದಿರದ ಸುತ್ತಮುತ್ತ ಶ್ವಾನ ದಳದಿಂದ ತಪಾಸಣೆ ನಡೆಸಲಾಗಿದ್ದು, ವಿಶೇಷ ಭದ್ರತಾ ಪಡೆ ಆಗಮಿಸಿರುವುದರಿಂದ ಸಾರ್ವಜನಿಕರು, ಭಕ್ತರು ಸಹಕರಿಸುವಂತೆ ಅವರು ವಿನಂತಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!